HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಪದಾಧಿಕಾರಿಗಳಿಂದ ಡಾ.ಹೆಗ್ಗಡೆ ಭೇಟಿ
    ಉಪ್ಪಳ: ಬಾಯಾರುಪದವು ಸಮೀಪದ ವಾಟೆತ್ತಿಲ ಜಾಲು ಸುಬ್ರಹ್ಮಣ್ಯೇಶ್ವರ ಕ್ಷೇತ್ರದ ಜೀಣರ್ೋದ್ಧಾರ ಸಮಿತಿ ಪದಾಧಿಕಾರಿಗಳು ಸೋಮವಾರ ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಧಮರ್ಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಶುಭಾಶೀವರ್ಾದ ಪಡೆದರು.
  ಕ್ಷೇತ್ರದ ಜೀಣೋದ್ಧಾರ ಕಾರ್ಯ ಭರದಿಂದ ಮುನ್ನಡೆಯುತ್ತಿದ್ದು, 2019 ರಲ್ಲಿ ಬ್ರಹ್ಮಕಲಶ ನಡೆಯಲಿದೆ. ಸಮಿತಿ ಪದಾಧಿಕಾರಿಗಳ ಧರ್ಮಸ್ಥಳ ಭೇಟಿ ಸಂದರ್ಭ ದೇವಸ್ಥಾನದ ಜೀಣರ್ೋದ್ಧಾರ ಕಾರ್ಯಗಳ ಬಗ್ಗೆ ಹೆಗ್ಗಡೆಯವರಿಗೆ ಮಾಹಿತಿ ನೀಡಿದರು. ಜಾಲು ದೇವಸ್ಥಾನದ ಜೀಣರ್ೋದ್ಧಾರ ಕಾರ್ಯಕ್ಕೆ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಹಾರೈಸಿರುವ ಹೆಗ್ಗಡೆಯವರು ಬ್ರಹ್ಮಕಲಶದ ಸಂದರ್ಭ ದೇವಸ್ಥಾನಕ್ಕೆ ಆಗಮಿಸುತ್ತೇನೆ ಎಂದು ತಿಳಿಸಿದ್ದಾರೆ. ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಭಟ್ ವಾಟೆತ್ತಿಲ ಜಾಲು, ಜೀಣರ್ೋದ್ಧಾರ ಸಮಿತಿ ಗೌರವಾಧ್ಯಕ್ಷ ಪದ್ಮಶ್ರೀ ಗಿರೀಶ್ ಭಾರಧ್ವಾಜ್, ಸುಧಾ.ಎಸ್.ವಿ ಭಟ್, ವೀರೇಶ್ವರ ಕಲ್ಮಡ್ಕರ್, ರವಿಶಂಕರ್ ಭಾರಧ್ವಾಜ್, ಪೆಲ್ತಾಜೆ ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.
      

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries