HEALTH TIPS

ಯಾವುದೇ ಶೀರ್ಷಿಕೆಯಿಲ್ಲ

  ಗರುಡ ಗರ್ವಭಂಗ ಯಕ್ಷಗಾನ ತಾಳಮದ್ದಳೆ
     ಕುಂಬಳೆ: ಕುಂಬಳೆ ಸಮೀಪದ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಮಧೂರು ಶ್ರೀ ಬೊಡ್ಡಜ್ಜ ಯಕ್ಷಭಾರತಿ ಕಲಾಸಂಘದಿಂದ ಗರುಡ ಗರ್ವಭಂಗ ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು. ಯಕ್ಷಗಾನ ಕಲಾಸಂಘದ ಅಧ್ಯಕ್ಷ ಬಾಲಕೃಷ್ಣ ಅಗ್ಗಿತ್ತಾಯ ಉದ್ಘಾಟಿಸಿದರು.
   ಹಿಮ್ಮೇಳದಲ್ಲಿ ರವಿಶಂಕರ್ ಮಧೂರು, ನಟರಾಜ ಕಲ್ಲೂರಾಯ, ಸುದರ್ಶನ ಕಲ್ಲೂರಾಯ, ಅರ್ಥಗಾರಿಕೆಯಲ್ಲಿ ವಾಮನ ಆಚಾರ್ ಬೋವಿಕ್ಕಾನ, ತಾರಾನಾಥ ಮಧೂರು, ಬಿ.ಬಾಲಕೃಷ್ಣ ಅಗ್ಗಿತ್ತಾಯ, ಮುರಳೀಧರ ಯಾದವ್ ನಾಯ್ಕಾಪು, ಉದಯಶಂಕರ ಭಟ್ ಮಜಲು, ಪ್ರತಾಪ ಕುಂಬಳೆ, ಸುಧಾ ನಟರಾಜ ಕಲ್ಲೂರಾಯ ಮೊದಲಾದವರು ಸಹಕರಿಸಿದರು.
   ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಕಾರ್ಯಕರ್ತರಾದ ರವಿ ನಾಯ್ಕಾಪು ಸ್ವಾಗತಿಸಿ, ಕಲಾಸಂಘದ ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries