HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಬಜಕ್ಕೂಡ್ಲುವಿನಿಂದ ಕೆಡೆಂಜಿಗೆ ನಾಮ ಸಂಕೀರ್ತನಾ ಯಾತ್ರೆ
     ಬದಿಯಡ್ಕ: ಶಬರಿಮಲೆಗೆ ಪ್ರಾಯಮಿತಿಯಿಲ್ಲದೆ ಮಹಿಳೆಯರ ಪ್ರವೇಶದ ಕುರಿತು ಸುಪ್ರೀಂಕೋಟರ್್ ತೀಪರ್ಿನ ವಿಚಾರದಲ್ಲಿ ಶಬರಿಮಲೆಯ ಪಾವಿತ್ರ್ಯತೆಯನ್ನು ಉಳಿಸಬೇಕೆಂದು ಆಗ್ರಹಿಸಿ ಅಯ್ಯಪ್ಪ ಭಕ್ತರ ವತಿಯಿಂದ ಬಜಕೂಡ್ಲು ಮಹಾಲಿಂಗೇಶ್ವರ ದೇವಸ್ಥಾನದಿಂದ ಕೆಡೆಂಜಿ ಶ್ರೀಮಹಾವಿಷ್ಣು ಕ್ಷೇತ್ರಕ್ಕೆ ಹಮ್ಮಿಕೊಂಡ ಅಯ್ಯಪ್ಪ ನಾಮ ಜಪಯಾತ್ರೆಯಲ್ಲಿ ಗೋವೊಂದು ಜೊತೆಗೂಡಿ ಅಚ್ಚರಿಯನ್ನು ಮೂಡಿಸಿತ್ತು. ಯಾತ್ರೆ ಸಾಗಿಬರುತ್ತಿರುವ ಸಂದರ್ಭದಲ್ಲಿ ಇಡಿಯಡ್ಕದಿಂದ ಜೊತೆಗೂಡಿದ ಗೋವು ಸುಮಾರು ಒಂದೂವರೆ ಕಿಲೋಮೀಟರ್ ದೂರದ ತನಕ ಯಾವುದೇ ಅಂಜಿಕೆಯಿಲ್ಲದೆ ಧೈರ್ಯದಿಂದ ಯಾತ್ರೆಯ ಮುಂಭಾಗದಲ್ಲಿ ಮುನ್ನುಗ್ಗಿ ಬರುತ್ತಿದ್ದುದು ಭಕ್ತಾದಿಗಳ ಧಾಮರ್ಿಕ ಭಾವನೆಯನ್ನು ಉದ್ದೀಪನಗೊಳಿಸಿತ್ತು.
ಪೆರ್ಲ, ಉಕ್ಕಿನಡ್ಕ, ಪಳ್ಳತ್ತಡ್ಕದ ಅಯ್ಯಪ್ಪ ಮಂದಿರಗಳ ವತಿಯಿಂದ ಹಾಗೂ ಕರಿಂಬಿಲ ತರವಾಡು ಮನೆಯ ಸದಸ್ಯರು ಯಾತ್ರೆಯ ಮಧ್ಯೆ ಭಕ್ತಾದಿಗಳಿಗೆ ಪಾನೀಯದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ನೂರಾರು ಮಹಿಳೆಯರು ಹಾಗೂ ಮಹನೀಯರು ಪಾಲ್ಗೊಂಡ ಯಾತ್ರೆಯು ಬದಿಯಡ್ಕ ಪೇಟೆಯನ್ನು ಸುತ್ತಿ ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಭೋಜನ ಪ್ರಸಾದವನ್ನು ಸ್ವೀಕರಿಸಿ ಸಂಪನ್ನವಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries