ಮುಳ್ಳೇರಿಯ: ಚೊಟ್ಟೆ ಕುಂಡಂಗುಳಿ ಶ್ರೀ ದುರ್ಗಾದೇವಿ ದೇವರ ಮನೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಭಾನುವಾರ ಸಮಾರೋಪಗೊಂಡಿತು.
ಕಾರ್ಯಕ್ರಮದ ಅಂಗವಾಗಿ 108 ತೆಂಗಿನಕಾಯಿ ಗಣಪತಿ ಹೋಮ, ಬ್ರಹ್ಮಶ್ರೀ ಐ.ಕೆ.ಕೃಷ್ಣದಾಸ ತಂತ್ರಿ ಇರಿಯ ಇವರಿಂದ ಶ್ರೀ ಕಾಲಭೈರವ, ಶ್ರೀ ಶಿವಪಾರ್ವತಿ, ಶ್ರೀ ಹೇಮಾಂಬಿಕೆ, ಶ್ರೀ ದುರ್ಗಾದೇವಿ, ಶ್ರೀ ಕಾಳಿ ಎಂಬೀ ಸಾನ್ನಿಧ್ಯ ದೇವರುಗಳ ನೂತನ ವಿಗ್ರಹಗಳ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ನಾಗರಕ್ತೇಶ್ವರಿ ಕಟ್ಟೆಯಲ್ಲಿ ತಂಬಿಲ, ಕಲಶಾಭಿಷೇಕ, ಪ್ರತಿಷ್ಠಾ ಬಲಿ, ಶ್ರೀ ವೆಂಕಟ್ರಮಣ ದೇವರ ಪಾನಕ ಪೂಜೆ, ಮಧ್ಯಾಹ್ನ ಮಹಾಪೂಜೆ, ಗುಳಿಗನಿಗೆ ಕಲಯ, ನಿತ್ಯ ನೈಮಿತ್ಯಾದಿಗಳ ನಿರ್ಣಯ ನಡೆಯಿತು. ಧಾರ್ಮಿಕ ಸಭೆ ನಡೆಯಿತು. ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ, ದೀಪಾರಾಧನೆ ನಡೆಯಿತು.
ವಿಶೇಷ-
ಆರ್ಯ-ಮರಾಠ ಸಮಾಜದ ಸುಮಾರು 25 ಕುಟುಂಬದ ಹಿರಿಯರು ಭಾಗವಹಿಸಿದ್ದರು. ಸುಮಾರು ಎರಡು ಸಾವಿರ ಮಂದಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಾಡ್ ಮನೆತನದ ಪುರುಷರು ಶ್ವೇತಾಂಬರಿಧಾರಿಗಳಾಗಿ, ಮಹಿಳೆಯರು ಪೀತಾಂಬರಿಗಳಾಗಿ ಕಾಣಿಸಿದರು.