
ತೀರ್ಪಿನ ವಿರುದ್ದ ಅಸಮಧಾನ:
ಪ್ರದರ್ಶಿಸಲ್ಪಟ್ಟ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವತೀಯ ಸ್ಥಾನ ಪಡೆದ ನಾಟಕಗಳನ್ನು ಮಲೆಯಾಳ ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರದರ್ಶಿಸಿದ್ದರು. ತೃತೀಯ ಸ್ಥಾನ ಪಡೆದ ಕಾಸರಗೋಡು ಸರಕಾರಿ ಕಾಲೇಜಿನ ನಾಟಕ ತಂಡ ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ತೀರ್ಪುಗಾರರು ಕನ್ನಡದ ಅವಗಣನೆ ಮಾಡಿದ್ದಾರೆ. ಉಚ್ಚಾರ ದೋಷಗಳಿದ್ದ ಮಲೆಯಾಳಂ ಭಾಷಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಕನ್ನಡ ನಾಟಕಗಳನ್ನು ಪ್ರಥಮ ಹಾಗೂ ದ್ವಿತೀಯ ಅಂಕಗಳಿಂದ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಅವರು ದುರಿದ್ದಾರೆ. ಕಾಲೇಜಿನ ಕನ್ನಡ ಪರ ಸಾಹಿತ್ಯ ಸಾಂಸ್ಕøತಿಕ ತಂಡವಾದ ಸ್ನೇಹರಂಗವೂ ತೀರ್ಪುಗಾರರ ಕ್ರಮವನ್ನು ಟೀಕಿಸಿದ್ದಾರೆ.


