HEALTH TIPS

ಅತಿರಾತ್ರಿ ಸೋಮಯಾಗದ ಸಿದ್ದತೆಗಳು ಸಾಗುತ್ತಿದೆ ಭರದಿಂದ-ಕೆ.ಸುರೇಂದ್ರನ್ ಭೇಟಿ

ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ 24ರ ವರೆಗೆ ಅತಿವಿಶಿಷ್ಟವಾಗಿ ನಡೆಯಲಿರುವ ಅತಿರಾತ್ರ ಸೋಮಯಾಗದ ಪೂರ್ವಭಾವೀ ಸಿದ್ದತೆಗಳು ಭರದಿಂದಸಾಗುತ್ತಿದೆ. ಯಾಗಭೂಮಿಯ ನಿರ್ಮಾಣ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಕಾರ್ಯಕರ್ತರು ನಿರಂತರವಾಗಿ ಶ್ರಮದಾನದ ಮೂಲಕ ಸಿದ್ದತೆಗಳನ್ನು ನಿರ್ವಹಿಸುತ್ತಿದ್ದಾರೆ. ಯಾಗಭೂಮಿಗೆ ಬುಧವಾರ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಮಾಹಿತಿ ನೀಡಿದರು. ಯಾಗದ ದಿನದಂದು ಸಮರ್ಪಿಸಲು ಅಗತ್ಯವಿರುವ ಎಳನೀರು ಸಮರ್ಪಿಸುವ ನಿಟ್ಟಿನಲ್ಲಿ ಫೆ.18 ರಂದು ಬೆಳಿಗ್ಗೆ 9 ಕ್ಕೆ ವಿವಿಧೆಡೆಗಳಿಂದ ಸಂಗ್ರಹಿಸಿದ ಎಳನೀರನ್ನು ಉಪ್ಪಳದಿಂದ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries