HEALTH TIPS

ದೈವಂಕೆಟ್ಟು ಮಹೋತ್ಸವ ಆರಂಭ



                 
     ಕಾಸರಗೋಡು: ತಳಂಗರೆ ಕಾನಕ್ಕೋಡು ಬಾಂದುಕುಡಿ ತರವಾಡಿನಲ್ಲಿ ಶ್ರೀ ವಯನಾಟ್ಟು ಕುಲವನ್ ದೈವಂಕೆಟ್ಟು ಮಹೋತ್ಸವ ಶನಿವಾರ ಆರಂಭಗೊಂಡಿತು.
       ಶನಿವಾರ ಸಂಜೆ ಸಂಧ್ಯಾ ದೀಪ, ಭಂಡಾರ ಆಗಮನ, ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಮತ್ತು ಶ್ರೀ ಪನ್ನಿಕುಳತ್ತಿ ಚಾಮುಂಡಿಯಮ್ಮನ ತೊಡಂಙಲ್ ನಡೆಯಿತು. ಭಾನುವಾರದಂದು ಮುಂಜಾನೆ ಶ್ರೀ ಕುರತ್ತಿಯಪ್ಪ ದೈವದ ಕೋಲ, ಶ್ರೀ ಪನ್ನಿಕುಳತ್ತಿ ಚಾಮುಂಡಿಯಮ್ಮ ದೈವದ ಕೋಲ, ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಶ್ರೀ ಗುಳಿಗ ದೈವ ಕೋಲ ನಡೆಯಿತು. ಸಂಜೆ ತೆಯ್ಯಂ ಕೂಡಲ್ ಜರಗಿತು.
   ಇಂದು ಸಂಜೆ 4 ಕ್ಕೆ ಕಾರ್ನೋನ್ ದೈವದ ವೆಳ್ಳಾಟ, 6 ಗಂಟೆಗೆ ಕೋರಚ್ಚನ್ ದೈವದ ವೆಳ್ಳಾಟ, ರಾತ್ರಿ 9 ಕ್ಕೆ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟ, ಬಪ್ಪಿಡಲ್ ಕಾರ್ಯಕ್ರಮ, 11 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ಹಾಗು 12 ಕ್ಕೆ ಶ್ರೀ ವಯನಾಟ್ಟು ಕುಲವನ್ ದೈವದ ವೆಳ್ಳಾಟ, 30 ರಂದು ಬೆಳಗ್ಗೆ 8 ಕ್ಕೆ ಕಾರ್ನೋನ್ ದೈವದ ಕೋಲ, 10 ಕ್ಕೆ ಕೋರಚ್ಚನ್ ದೈವದ ಕೋಲ, ಮಧ್ಯಾಹ್ನ 12 ಕ್ಕೆ  ಶ್ರೀ ಕಂಡನಾರ್ ಕೇಳನ್ ದೈವದ ಪುರಪ್ಪಾಡ್, ಸಂಜೆ 4 ಕ್ಕೆ ಶ್ರೀ ವಯನಾಟ್ಟು ಕುಲವನ್ ದೈವದ ಪುರಪ್ಪಾಡ್, ರಾತ್ರಿ 10 ಕ್ಕೆ ಮುರಪಿಳರ್ಕಲ್ ಮತ್ತು ಕೈವೀದ್ ನಂತರ ಅನ್ನಸಂತರ್ಪಣೆ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries