HEALTH TIPS

ಮಾನವ ಸೌಹಾರ್ದ ಸಂಗಮ

      ಕಾಸರಗೋಡು: ಎ ಹ್ಯೂಮನ್ಸ್ ಅಸೋಸಿಯೇಶನ್ ಆಫ್ ಕಾಸರಗೋಡು ಫೆÇೀರ್ ಎಂಪವರ್‍ಮೆಂಟ್(ಎಡಬ್ಲ್ಯುಎಕೆಇ) ನೇತೃತ್ವದಲ್ಲಿ ಮಾನವ ಸೌಹಾರ್ದ ಸಂಗಮ ಭಾನುವಾರ ಜರಗಿತು.
    ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟವನ್ನು ಖಂಡಿಸಿ ಮುಸ್ಲಿಂ ಮಹಿಳೆಯರ ಸಂಗಮದ ಆಶ್ರಯದಲ್ಲಿ ಕಾಸರಗೋಡು ರೈಲು ನಿಲ್ದಾಣ ಸಮೀಪದ ಅವರ್ ಲೇಡಿ ಆಫ್ ಚರ್ಚ್ ಪರಿಸರದಲ್ಲಿ ಮಾನಸ ಸೌಹಾರ್ದ ಸಂಗಮ ನಡೆಯಿತು. ಈಸ್ಟರ್ ದಿನದಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆನ ಬಾಂಬ್ ಸ್ಪೋಟದಲ್ಲಿ ಸಾವಿಗೀಡಾದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
    ಶಾಸಕ ಎನ್.ಎ.ನೆಲ್ಲಿಕುನ್ನು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಸರಗೋಡು ಪೀಪಲ್ಸ್ ಫಾರಂ ಅಧ್ಯಕ್ಷ ಪೆÇ್ರ.ವಿ.ಗೋಪಿನಾಥ್, ನ್ಯಾಯವಾದಿ ಕೆ.ಶ್ರೀಕಾಂತ್, ಕ್ರೈಂಬ್ರಾಂಚ್ ಸಿ.ಐ. ಅಬ್ದುರಹೀಂ, ಪಾ.ಸಂತೊಷ್ ಲೋಬೋ, ಫಾ.ಬಿಜು ನೆಡುಂಪರಂಬಿಲ್, ಸ್ಟ್ಯಾನ್ಲಿ ಡಿಸೂಸ, ಸಿಪಿಸಿಆರ್‍ಐ ಪ್ರಿನ್ಸಿಪಲ್ ವಿಜ್ಞಾನಿ ಡಾ.ಸಿ.ತಂಬಾನ್, ಅವೇಕ್ ಪದಾಧಿಕಾರಿಗಳಾದ ಸಕೀನ ಅಕ್ಬರ್, ಸುಲೈಖಾ ಮಾಹಿನ್, ಮರಿಯಂ ಸಲಾಹುದ್ದೀನ್ ಮೊದಲಾದವರು ಮಾತನಾಡಿದರು.
    ಅವೇಕ್ ಅಧ್ಯಕ್ಷೆ ಯಾಸ್ಮಿನ್ ಮುಸ್ತಫ ಅಧ್ಯಕ್ಷತೆ ವಹಿಸಿದರು. ಶಾಂತಿಯ ಸಂಕೇತವಾಗಿ ಎರಡು ಪಾರಿವಾಳಗಳನ್ನು ಹಾರಿ ಬಿಡಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries