HEALTH TIPS

ಬಾಯಾರು ಪ್ರಶಾಂತಿಯಲ್ಲಿ ಯೋಗ ದಿನಾಚರಣೆ-ಸೂರ್ಯ ನಮಸ್ಕಾರ ಪ್ರದರ್ಶನ

     
      ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಉಳುವಾನ ಶಂಕರ ಭಟ್ ಭಾಗವಹಿಸಿ ಯೋಗದ ಮಹತ್ವವನ್ನು ಮಕ್ಕಳಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸುಮಾರು 150 ಮಕ್ಕಳು ಏಕಕಾಲದಲ್ಲಿ ಸೂರ್ಯನಮಸ್ಕಾರದ ಪ್ರದರ್ಶನ ನೀಡಿದರು.
     ಸಮಾರಂಭದಲ್ಲಿ ಆಡಳಿತ ಟ್ರಸ್ಟಿ  ಹೆಚ್.ಮಹಾಲಿಂಗ ಭಟ್,  ಕಮಲ ಟೀಚರ್ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಅಧ್ಯಾಪಕ ಶ್ರೀಕಾಂತ್ ಸ್ವಾಗತಿಸಿ, ಪ್ರಾಂಶುಪಾಲ ಅನೂಪ್.ಕೆ ವಂದಿಸಿದರು. ದೈಹಿಕ ಶಿಕ್ಷಕ ಪ್ರಕಾಶ್ ಮಾಣಿ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries