HEALTH TIPS

ಸಮರಸ-ಕರ್ಕಟಕ ಮಾಸಾಚರಣೆ ಪ್ರಯುಕ್ತ ಕುಮಾರ ವಾಲ್ಮೀಕಿ ಯಾ ನರಹರಿ ಕವಿಯ ತೊರವೆ ರಾಮಾಯಣ-ಸಂಚಿಕೆ-03


ಅರಸುಗಳೊಳಧಿರಾಜ ಚಕ್ರೇ
ಶ್ವರನ ಬಸುಱಲಿ ಬಂದು ಲಕ್ಷ್ಮೀ
ವರನ ತೂಕದ ಸಾರ್ವಭೌಮನ ಕೈವಿಡಿದು ಕಡೆಗೆ
ನಿರಯನಿಳಯನ ನಿಳಯದಲಿ ಕೈ
ಸೆರೆಗೆ ಸಂದೌ ತಾಯೆಯೆಂದಿಳೆ
ಗುರುಳಿಸಿದನಶ್ರುಗಳನಾ ಕೈಯೊಡನೆ ಕಲಿಹನುಮ ||೨೮||

ಇರಲು ಮಾರುತಿ ಶಿಂಶುಪಾವರ
ತರುವಿನಗ್ರದಲವನಿಜೆಯ ಸಂ
ದರುಶನದ ಸಮಯಕ್ಕೆ ಸುಳಿದುದು ಮೂಡಲಿನಬಿಂಬ
ಮುಱಿದು ನಿದ್ರೆಯ ಕಾಪಿನಸುರರ
ತರುಣಿಯರು ಬಳಸಿದರು ಬಿದ್ದುದು
ತರಣಿಬಿಂಬ ಮಹಾಂಬುನಿಧಿಯಲಿ ನಡೆದು ಪಶ್ಚಿಮದ ||೨೯||

ಆಡಲೇನದ ಜೀಯ ಲೋಕದ
ಜೋಡೆಯೆ ಜಾನಕಿ ಜಗತ್ರಯ
ಗಾಢಪತಿಭಕ್ತಿಯರಿಗೀ ಸತಿಮಾತೃಭವನವಲ
ಆಡಿದಡೆ ಜನವೇನನೆಂಬುದೊ
ಖೋಡಿಗಳು ಕಿಱಿದುಂಟು ಮಿಕ್ಕಿನ
ಹಾಡಿಹೊಗಳಿಸಿಕೊಂಬ ಜಗದ ಪತಿವ್ರತಾಜನಕೆ ||೪೨||

ಕಂಡು ಬಲ್ಲೆನು ಹಲಬರನು ಭೂ
ಮಂಡಲದೊಳೀ ಸತಿಯ ಹೋಲುವ
ಹೆಂಡಿರಿಲ್ಲಾ ಧ್ರು ವಸಿಷ್ಠ ಮಹಾತ್ರಿಮುನಿವರರ
ಹೆಂಡಿರುಗಳೊಂದೋಜೆ ಜಗದಗಲ
ಖಂಡಸುವ್ರತೆ ಸೀತೆ ಹುಸಿದಡೆ
ಖಂಡಪರಶುವಿನಾಣೆ ಸತ್ಯವಿದೆಂದಳಾ ಸರಮೆ ||೪೩||

ಕಣುಗಳಲಿ ಕಿಡಿಸೂಸೆ ಕೈಯಲಿ
ತೃಣವನುಱೆ ಮುಱಿದಿಕ್ಕಿ ನುಡಿದಳು
ಬಣಗುರಕ್ಕಸ ಕೇಳೆಲವೊ ನಿನಗಿನಿತುಗುಣವಿರಲು
ತ್ರಿಣಯನನಧನುವಂದದೇತಕೆ
ಮಣಿಯದಾದುದು ಸುಡುಸುಡೆಲವೋ
ಹೆಣದಿನಿಹಿಗಳಿಗುಚಿತವೀ ಮಾತೆಂದಳಾ ಸೀತೆ ||೫೨||

ತಂದಡತಿಬಲನಹುದಲೇ ರಘು
ನಂದನನ ಸಮ್ಮುಖದೊಳೆನ್ನನು
ಹಂದೆ ಹೋಗೆಲೆ ನಾಯೆ ನಿನಗೇಕಮರಮಾನವರ
ದಂದಶೂಕರ ಭುವನದೊಡೆತನ
ಬೆಂದ ಮೋಱೆಗೆ ಬಹುವಿಕಾರದ
ಮಂದೆವಾಳದ ಮಾತದೇಕೆಂದುಱುಬಿದಳು ಖಳನ ||೫೩||

ವಾಸುಗಿಯ ನೀರೊಳ್ಳೆ ತನ್ನ ನಿ
ವಾಸದಲಿ ಜಱೆವುದು ಗಡೆಲವೋ
ದಾಶರಥಿಯನುಚರರ ಲೆಂಕರ ಲೆಂಕರನುಚರರ
ದಾಸಿಯರ ಲೆಂಕರಿಗೆ ಸರಿಬರ
ಲೇಸಱವನೀ ನಾಯ ಕಳುಹೆಂ
ದಾ ಸರಮೆಗಾ ಸೀತೆ ಕೋಪಿಸಿ ನುಡಿದಳಿಂತೆಂದು ||೫೬||

ಲಲನೆ ಕೇಳೀ ರಕ್ಕಸನ ಕಡಿ
ದಲೆಯ ಮೆಟ್ಟಿದು ಮಿಂದ ಬಳಿಕೀ
ಖಳನ ಸತಿಯರು ಸಿದ್ಧವಿದನೀ
ಹೊಲೆಯಗುತ್ತರಕೊಟ್ಟು ಕಳುಹೀ
ಗಳಹರಕ್ಕಸನಾಯನೆಂದಳು ಸರಮೆಗಾ ಸೀತೆ ||೫೭||

ಅಕಟ ಪೂರ್ವದಲಾವ ಹಿರಿಯರ
ಟಕರಿಗಳೆದನದಾವ ದೈವದ
ಭಕುತಿಯನು ಕುಂದಿದೆನೊ ನಿಂದಿಸಿದೆನೊ ಗುರುದ್ವಿಜರ
ವಿಕಳತೆಯಲಿ ವಿವೇಕಿಸದೆ ಪಾ
ತಕವ ನೆನೆದೆನೊ ಪತಿಯಳಕಟಾ
ಪ್ರಕಟಿಸಿತೆ ದುಷ್ಕರ್ಮಫಲವೆನಗೆಂದಳಾ ಸೀತೆ ||೬೪||

ಸುಳಿಯಲೇಕೆ ಕುರಂಗ ರಾಮನ
ಕಳುಹಲೇಕೆ ದುರುಕ್ತಿಯಲಿ ನುಡಿ
ದಲಘುಬಲ ಲಕ್ಷ್ಮಣನನುಱುಬಲದೇಕೆ ಬೆಂಬಳಿಯ
ಲಲನೆಯಿವಳಲ್ಲೆಂದು ಚಿತ್ತದೊ
ಳಲಸಿದರೊ ಮೇಣ್ ಖಳರ ಮಾಯೆಗೆ
ಸಿಲುಕಿದರೊ ಸಾವ್ ಬಾರದೆನಗಕಟೆಂದಳಾ ಸೀತೆ ||೬೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries