ಅರಸುಗಳೊಳಧಿರಾಜ ಚಕ್ರೇ
ಶ್ವರನ ಬಸುಱಲಿ ಬಂದು ಲಕ್ಷ್ಮೀ
ವರನ ತೂಕದ ಸಾರ್ವಭೌಮನ ಕೈವಿಡಿದು ಕಡೆಗೆ
ನಿರಯನಿಳಯನ ನಿಳಯದಲಿ ಕೈ
ಸೆರೆಗೆ ಸಂದೌ ತಾಯೆಯೆಂದಿಳೆ
ಗುರುಳಿಸಿದನಶ್ರುಗಳನಾ ಕೈಯೊಡನೆ ಕಲಿಹನುಮ ||೨೮||
ಇರಲು ಮಾರುತಿ ಶಿಂಶುಪಾವರ
ತರುವಿನಗ್ರದಲವನಿಜೆಯ ಸಂ
ದರುಶನದ ಸಮಯಕ್ಕೆ ಸುಳಿದುದು ಮೂಡಲಿನಬಿಂಬ
ಮುಱಿದು ನಿದ್ರೆಯ ಕಾಪಿನಸುರರ
ತರುಣಿಯರು ಬಳಸಿದರು ಬಿದ್ದುದು
ತರಣಿಬಿಂಬ ಮಹಾಂಬುನಿಧಿಯಲಿ ನಡೆದು ಪಶ್ಚಿಮದ ||೨೯||
ಆಡಲೇನದ ಜೀಯ ಲೋಕದ
ಜೋಡೆಯೆ ಜಾನಕಿ ಜಗತ್ರಯ
ಗಾಢಪತಿಭಕ್ತಿಯರಿಗೀ ಸತಿಮಾತೃಭವನವಲ
ಆಡಿದಡೆ ಜನವೇನನೆಂಬುದೊ
ಖೋಡಿಗಳು ಕಿಱಿದುಂಟು ಮಿಕ್ಕಿನ
ಹಾಡಿಹೊಗಳಿಸಿಕೊಂಬ ಜಗದ ಪತಿವ್ರತಾಜನಕೆ ||೪೨||
ಕಂಡು ಬಲ್ಲೆನು ಹಲಬರನು ಭೂ
ಮಂಡಲದೊಳೀ ಸತಿಯ ಹೋಲುವ
ಹೆಂಡಿರಿಲ್ಲಾ ಧ್ರು ವಸಿಷ್ಠ ಮಹಾತ್ರಿಮುನಿವರರ
ಹೆಂಡಿರುಗಳೊಂದೋಜೆ ಜಗದಗಲ
ಖಂಡಸುವ್ರತೆ ಸೀತೆ ಹುಸಿದಡೆ
ಖಂಡಪರಶುವಿನಾಣೆ ಸತ್ಯವಿದೆಂದಳಾ ಸರಮೆ ||೪೩||
ಕಣುಗಳಲಿ ಕಿಡಿಸೂಸೆ ಕೈಯಲಿ
ತೃಣವನುಱೆ ಮುಱಿದಿಕ್ಕಿ ನುಡಿದಳು
ಬಣಗುರಕ್ಕಸ ಕೇಳೆಲವೊ ನಿನಗಿನಿತುಗುಣವಿರಲು
ತ್ರಿಣಯನನಧನುವಂದದೇತಕೆ
ಮಣಿಯದಾದುದು ಸುಡುಸುಡೆಲವೋ
ಹೆಣದಿನಿಹಿಗಳಿಗುಚಿತವೀ ಮಾತೆಂದಳಾ ಸೀತೆ ||೫೨||
ತಂದಡತಿಬಲನಹುದಲೇ ರಘು
ನಂದನನ ಸಮ್ಮುಖದೊಳೆನ್ನನು
ಹಂದೆ ಹೋಗೆಲೆ ನಾಯೆ ನಿನಗೇಕಮರಮಾನವರ
ದಂದಶೂಕರ ಭುವನದೊಡೆತನ
ಬೆಂದ ಮೋಱೆಗೆ ಬಹುವಿಕಾರದ
ಮಂದೆವಾಳದ ಮಾತದೇಕೆಂದುಱುಬಿದಳು ಖಳನ ||೫೩||
ವಾಸುಗಿಯ ನೀರೊಳ್ಳೆ ತನ್ನ ನಿ
ವಾಸದಲಿ ಜಱೆವುದು ಗಡೆಲವೋ
ದಾಶರಥಿಯನುಚರರ ಲೆಂಕರ ಲೆಂಕರನುಚರರ
ದಾಸಿಯರ ಲೆಂಕರಿಗೆ ಸರಿಬರ
ಲೇಸಱವನೀ ನಾಯ ಕಳುಹೆಂ
ದಾ ಸರಮೆಗಾ ಸೀತೆ ಕೋಪಿಸಿ ನುಡಿದಳಿಂತೆಂದು ||೫೬||
ಲಲನೆ ಕೇಳೀ ರಕ್ಕಸನ ಕಡಿ
ದಲೆಯ ಮೆಟ್ಟಿದು ಮಿಂದ ಬಳಿಕೀ
ಖಳನ ಸತಿಯರು ಸಿದ್ಧವಿದನೀ
ಹೊಲೆಯಗುತ್ತರಕೊಟ್ಟು ಕಳುಹೀ
ಗಳಹರಕ್ಕಸನಾಯನೆಂದಳು ಸರಮೆಗಾ ಸೀತೆ ||೫೭||
ಅಕಟ ಪೂರ್ವದಲಾವ ಹಿರಿಯರ
ಟಕರಿಗಳೆದನದಾವ ದೈವದ
ಭಕುತಿಯನು ಕುಂದಿದೆನೊ ನಿಂದಿಸಿದೆನೊ ಗುರುದ್ವಿಜರ
ವಿಕಳತೆಯಲಿ ವಿವೇಕಿಸದೆ ಪಾ
ತಕವ ನೆನೆದೆನೊ ಪತಿಯಳಕಟಾ
ಪ್ರಕಟಿಸಿತೆ ದುಷ್ಕರ್ಮಫಲವೆನಗೆಂದಳಾ ಸೀತೆ ||೬೪||
ಸುಳಿಯಲೇಕೆ ಕುರಂಗ ರಾಮನ
ಕಳುಹಲೇಕೆ ದುರುಕ್ತಿಯಲಿ ನುಡಿ
ದಲಘುಬಲ ಲಕ್ಷ್ಮಣನನುಱುಬಲದೇಕೆ ಬೆಂಬಳಿಯ
ಲಲನೆಯಿವಳಲ್ಲೆಂದು ಚಿತ್ತದೊ
ಳಲಸಿದರೊ ಮೇಣ್ ಖಳರ ಮಾಯೆಗೆ


