HEALTH TIPS

ಸಮರಸ ಶಬ್ದಾಂತರಂಗ ಸೌರಭ-15-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

             ಇಂದಿನ ಟಿಪ್ಪಣಿ
೧.  ‘ಕರಣ’ ಗಣದಿ ಕಿರಿಕಿರಿಂಗಣ...

ಕರಣ’ ಎಂದರೆ ‘ಮಾಡುವುದು’ ಎಂಬ ಸಾಮಾನ್ಯ ಅರ್ಥ ಬರುತ್ತದೆ. ಕರ್ನಾಟಕದ ಏಕೀಕರಣ ಎಂಬ ಒಳ್ಳೆಯ ಉದಾಹರಣೆಯ ಮೂಲಕ ಗಮನಿಸುವುದಾದರೆಕನ್ನಡ ಮಾತನಾಡುವ ಜನರು ನೆಲೆಸಿದ್ದಹರಿದು ಹಂಚಿಹೋಗಿದ್ದವಿವಿಧ ಪ್ರದೇಶಗಳನ್ನು ಒಂದು ಮಾಡುವುದು ಎಂಬ ಅರ್ಥ. ಇಂತಹ ಒಳ್ಳೆಯ ಕೆಲಸವನ್ನು ಆಲೂರು ವೆಂಕಟರಾಯರೇ ಮೊದಲಾದ ಧೀಮಂತ ಕನ್ನಡಿಗರು ಮಾಡಿ ನಮಗೆ ಸುಂದರ ಕರ್ನಾಟಕ ರಾಜ್ಯವನ್ನು ಒದಗಿಸಿಕೊಟ್ಟಿದ್ದಾರೆ. ಏಕೀಕರಣ ಎಂದರೆ ಒಂದು ಮಾಡುವುದುಅಥವಾ ಒಂದುಗೂಡಿಸುವುದು ಎನ್ನೋಣ. ಏಕ ಎಂದರೆ ಒಂದು (ಸಂಸ್ಕೃತದಲ್ಲಿ)ಕರಣ ಎಂದರೆ ಮಾಡುವುದು. ಸಂಸ್ಕೃತ ಭಾಷೆಯ ನಿಯಮಗಳಿಂದಾಗಿಏಕಕರಣ ಎನ್ನುವಂತಿಲ್ಲಏಕೀಕರಣ ಎನ್ನಬೇಕು. ಇಂತಹದೇ ಇನ್ನೊಂದು ಶಬ್ದ ಸಮೀಕರಣ. ಇದರ ಅರ್ಥ ಸಮ ಮಾಡುವುದುಸಮಾನಗೊಳಿಸುವುದು ಎಂದು. ಹಾಗೆಯೇವರ್ಗೀಕರಣ ಎಂದರೆ ವರ್ಗ(ಗುಂಪು)ಗಳಾಗಿಮಾಡುವುದು. ಇಲ್ಲಿ ಏಕಸಮವರ್ಗ - ಇವೆಲ್ಲ ಸಂಸ್ಕೃತ ಪದಗಳೆಂಬುದನ್ನು ಗಮನಿಸಬೇಕು. ಸಂಸ್ಕೃತ ನಾಮವಿಶೇಷಣ ಪದಗಳೊಂದಿಗೆ ‘ಕರಣ’ ಸೇರುವುದು ವ್ಯಾಕರಣಬದ್ಧ ಪದರಚನೆ.


ಆದರೆ ಈಗ ಒಂದು ಕೆಟ್ಟ ಚಾಳಿ ಶುರುವಾಗಿದೆ. ಸಂಸ್ಕೃತ ನಾಮವಿಶೇಷಣಗಳೇ ಆಗಬೇಕಂತಿಲ್ಲಕನ್ನಡದ ಅಥವಾ ಇಂಗ್ಲಿಷ್ ಪದಗಳಿಗೂ ‘ಕರಣ’ ತೊಡಿಸಿ ಕುಲಗೆಡಿಸುವುದು. ಅದರ ಪರಿಣಾಮವೇ ‘ಸೇತುವೆ ಅಗಲೀಕರಣ, ‘ಶ್ವಾಸಕೋಶದ ಉದ್ದೀಕರಣ, ‘ರಸ್ತೆಯ ಡಾಂಬರೀಕರಣ, ‘ಹಾಲಿನ ಪ್ಯಾಶ್ಚರೀಕರಣ, ‘ಇಂಗ್ಲಿಷ್ ಸಾಕ್ಷ್ಯಚಿತ್ರಗಳ ಕನ್ನಡೀಕರಣ’ ಮುಂತಾದ ಕಲಬೆರಕೆ ಪದಾರ್ಥಗಳುಳ್ಳ ವಾಕ್ಯಗಳು. ಇನ್ನೂ ಮುಂದುವರಿದು ಕೆಲವು ಪ್ರಭೃತಿಗಳು(ಮತ್ತು ಪತ್ರಕರ್ತರು ಕೂಡ) ‘ರಾಜಕೀಕರಣ, ‘ಸಮಾಜೀಕರಣ, ‘ಆರ್ಥಿಕೀಕರಣ, ‘ತಾಯೀಕರಣ’ ಮುಂತಾದ ಅಸಂಬದ್ಧ ಪದಗಳನ್ನು ಸೃಷ್ಟಿಸಿದ್ದಾರೆ. ಕನ್ನಡ ದಿನಪತ್ರಿಕೆಗಳು ಇವುಗಳನ್ನು ಯದ್ವಾತದ್ವಾ ಬಳಸುತ್ತಿವೆ. ಇವುಗಳನ್ನು ಹುಟ್ಟಿಸಿದ ಪ್ರಭೃತಿಗಳು ಬುದ್ಧಿಯಲ್ಲಿ ಎಷ್ಟು ಅರೆಬೆಂದವುಗಳೋ ಅಷ್ಟೇ ಅರೆಬೆಂದಂಥವು ವ್ಯಾಕರಣರೀತ್ಯಾ ಈ ಪದಗಳು. ಸಾಧ್ಯವಾದಷ್ಟು ಮಟ್ಟಿಗೆ ನಾವು ಇಂಥವನ್ನು ಬಳಸದಿರುವುದು ಒಳ್ಳೆಯದು.
====
೨. ಕ್ರಿಯಾಪದಗಳಿಗೂ ನಾವು ವಚನಬದ್ಧರಾಗಿರಬೇಕು.

`ಪ್ರಚಾರ ಮತ್ತು ಇತರ ಬಾಹ್ಯ ಕಾರಣಗಳು ಕೆಲವೊಮ್ಮೆ ಪುಸ್ತಕವನ್ನು ಮಂಚೂಣಿಗೆ ತರುತ್ತದೆ.'

ಸಾಕಷ್ಟು ಲೇಖನ ಪ್ರಬಂಧ ಕಥೆ-ಕಾದಂಬರಿಗಳನ್ನೂ ಬರೆದಿರುವಪುಸ್ತಕಗಳನ್ನು ಪ್ರಕಟಿಸಿರುವಲೇಖಕರೊಬ್ಬರ ಫೇಸ್‌ಬುಕ್ ಪ್ರತಿಕ್ರಿಯೆಯಲ್ಲಿಈ ವಾಕ್ಯವನ್ನು ಈಗಷ್ಟೇ ಗಮನಿಸಿದೆಇವತ್ತಿನ ಕಲಿಕೆಯಲ್ಲಿ ಒಂದು ಟಿಪ್ಪಣಿಗೆಸೂಕ್ತ ಸರಕು ಎಂದೆನಿಸಿ ಎತ್ತಿಕೊಂಡಿದ್ದೇನೆ.

ಒಂದನೆಯದಾಗಿ ‘ಮಂಚೂಣಿ’ ಎಂಬ ಪದಬಳಕೆ ತಪ್ಪು. ಅದು ಮುಂಚೂಣಿ ಆಗಬೇಕು. ಮೊದಲುಅಥವಾ ಮುಂಭಾಗ ಎಂದು ಅರ್ಥ. ಮುಂದುಮುಂಗಡಮುಂಭಾಗಮುನ್ನಡೆ ಇತ್ಯಾದಿಯಲ್ಲಿರುವ ’ಮುಂ’ ದಿಂದಲೇ‘ಮುಂಚೂಣಿ’ ಸಹ ಬಂದಿರುವುದು.

ಇನ್ನೊಂದು ತಪ್ಪು ‘ಪ್ರಚಾರ ಮತ್ತು ಇತರ ಬಾಹ್ಯ ಕಾರಣಗಳು’ ಎಂದು ಬಹುವಚನದ ನಾಮಪದ ಇರುವಾಗ ವಾಕ್ಯದಲ್ಲಿನ ಕ್ರಿಯಾಪದವೂ ಬಹುವಚನ ರೂಪದಲ್ಲಿಯೇ ಇರಬೇಕು. ಹಾಗಾಗಿ, ‘ತರುತ್ತದೆ’ ಸರಿಯಲ್ಲ, ‘ತರುತ್ತವೆ’ ಎಂದಾಗಬೇಕು.

ಹೈನುಪದಾರ್ಥಗಳನ್ನು ಮಾರುವ ಅಂಗಡಿಯ ಫಲಕವು ‘ಇಲ್ಲಿ ಹಾಲುಮೊಸರುಬೆಣ್ಣೆತುಪ್ಪ ಸಿಗುತ್ತದೆ’ ಅಲ್ಲ, ‘ಇಲ್ಲಿ ಹಾಲು ಮೊಸರು ಬೆಣ್ಣೆ ತುಪ್ಪ ಸಿಗುತ್ತವೆ’ ಎಂದು ಇರಬೇಕು.

====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:

ಅ) ಅದ್ದೂರಿ (ವೈಭವವುಳ್ಳದ್ದು) ಸರಿ. ‘ಅದ್ಧೂರಿ’ ರೂಢಿಯಲ್ಲಿದೆಯಾದರೂ ಶುದ್ಧವಲ್ಲ.
ಆ) ವೈಡೂರ್ಯ (ನವರತ್ನಗಳಲ್ಲೊಂದು) ಸರಿ. ವೈಢೂರ್ಯ ತಪ್ಪು.
ಇ) ಮರ್ದಿನಿ (ಮಹಿಷಾಸುರಮರ್ದಿನಿ) ಸರಿ. ಮರ್ಧಿನಿ ತಪ್ಪು.
ಈ) ಪತಿತ (ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ) ಸರಿ. ಪತಿತ ಎಂದರೆ ಕೆಳಗೆ ಬಿದ್ದ ಎಂದು ಅರ್ಥ. ಪತೀತ ತಪ್ಪು. (ಪತೀತ ಪಾವನ ಸೀತಾರಾಮ್ ಎಂದೇ ಹಾಡುವವರು ಹೆಚ್ಚು).
ಉ) ವೈಯಕ್ತಿಕ (ಒಬ್ಬ ವ್ಯಕ್ತಿಗೆ ಸಂಬಂಧಿಸಿದ) ಸರಿ. ವೈಯುಕ್ತಿಕ ತಪ್ಪು.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
FEEDBACK: samarasasudhi@gmail.com


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries