HEALTH TIPS

ಈ ಹೊತ್ತಿಗೆ ಈ ಹೊತ್ತಗೆ-ಸಂವಾದ 9

 
    ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಹಿರಿಯ ಪ್ರಾದ್ಯಾಪಕ, ಸಾಹಿತಿ ಟಿ.ಎ.ಎನ್.ಖಂಡಿಗೆ ಹಾಗೂ ಸಾಹಿತ್ಯ ಸ್ನೇಹಿತರು ಮುನ್ನಡೆಸುತ್ತಿರುವ ಈಹೊತ್ತಿಗೆ ಈ ಹೊತ್ತಗೆ ಶಿರೋನಾಮೆಯಡಿಯ ಇತ್ತೀಚೆಗಿನ ಕನ್ನಡದ ಶ್ರೇಷ್ಠ ಕೃತಿಗಳ ವಿಮರ್ಶೆ-ಸಂವಾದ ಸರಣಿಯ 9ನೇ ಕಾರ್ಯಕ್ರಮ ನಿನ್ನೆ ಅಪರಾಹ್ನ ಸಿದ್ದಕಟ್ಟೆ ಚರ್ಚ್ ಸನಿಹದ ಪಿಂಕಿ ಟವರ್ಸ್  ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಷ.ಶೆಟ್ಟರ್ ಅವರ "ಶಂಗಂ ತಮಿಳಗಂ" ಮತ್ತು "ಕನ್ನಡ ನಾಡು ನುಡಿ" ಕೃತಿಯ ಬಗ್ಗೆ ವಿಮರ್ಶೆ ಸಂವಾದ ನಡೆಯಿತು.
     ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ, ಚಿಂತಕ, ಲೇಖಕ ಡಾ.ಸುಬ್ರಹ್ಮಣ್ಯ ಭಟ್ ಕೃತಿ ಸ್ಪಂದನ ನಡೆಸಿದರು. ಸಂಯೋಜಕ ಟಿ.ಎ.ಎನ್.ಖಂಡಿಗೆ, ಕವಿತಾ ಟಿ.ಎ.ಎನ್.ಖಂಡಿಗೆ, ಭರತ್ ಕುಮಾರ್ ಸಿದ್ದಕಟ್ಟೆ,ಸಾಹಿತ್ಯ ಪ್ರೇಮಿಗಳು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries