ಮುಳ್ಳೇರಿಯ: ಬಳಕೆಯಿಲ್ಲದ ಪೆನ್ ಗಳನ್ನು ಸಂಗ್ರಹಿಸಿ ಪುನರ್ ನಿರ್ಮಾಣ ನಡೆಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗುವ "ಪೆನ್ ಫ್ರೆಂಡ್" ಯೋಜನೆ ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆರಂಭಗೊಂಡಿದೆ.
ಹರಿತ ಕೇರಳಂ ಮಿಷನ್ ವತಿಯಿಂದ ಪ್ರಕೃತಿ ಸಂರಕ್ಷಣೆ ಜಾಗೃತಿ ಉದ್ದೇಶದಿಂದ ಈ ಯೋಜನೆ ಜಾರಿಗೊಳ್ಳುತ್ತಿದೆ. ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಯೋಜನೆಗೆ ಚಾಲನೆ ನೀಡಿದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆ ಕುರಿತು ಮಾಹಿತಿ ನೀಡಿದರು. ಶಾಲೆ ಪ್ರಬಂಧಕ ಡಾ.ವಿ.ಇ.ರಮಣ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಪದ್ಮನಾಭನ್, ಎಂ.ಸಾವಿತ್ರಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಅಶೋಕ ಅರಳಿತ್ತಾಯ ಸ್ವಾಗತಿಸಿ, ಎನ್.ಜಿ.ಗೋಪಾಲಕೃಷ್ಣನ್ ವಂದಿಸಿದರು.


