HEALTH TIPS

ಮಂಗಲ್ಪಾಡಿ ಸೇ.ಸ.ಬ್ಯಾಂಕ್ ಚುನಾವಣೆ-ಸಹಕಾರ ಭಾರತಿಯ 11 ಮಂದಿ ಅವಿರೋಧ ಆಯ್ಕೆ


      ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಸಂಸ್ಥೆಯ 2019 - 2024ರ ಅವಧಿಯ  ಆಡಳಿತ ಮಂಡಳಿಗೆ  ನಡೆದ ಚುನಾವಣೆಯಲ್ಲಿ ಸಹಕಾರ ಭಾರತೀಯ ಎಲ್ಲಾ 11 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಪ್ರೇಮ್ ಕುಮಾರ್ ಐಲ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಕುಬಣೂರು ಹಾಗೂ ನಿರ್ದೇಶಕರುಗಳಾಗಿ ಭರತ್ ರೈ ಕೋಡಿಬೈಲು, ಜಯಂತ ಬಂದ್ಯೋಡು, ಜಯಂತಿ ಟಿ ಶೆಟ್ಟಿ ಮಂಗಲ್ಪಾಡಿ, ಪ್ರೇಮಲತಾ ಅಂಬಾರ್, ರಾಮ ಕೃಷ್ಣನಗರ, ರವೀಶ ಮಂಗಲ್ಪಾಡಿ, ರೇಖಾ ಮಂಗಲ್ಪಾಡಿ, ಶ್ರೀಧರ ಬೀರೀ ಗುಡ್ಡೆ,  ಉದಯಕುಮಾರ್ ಹೇರೂರು ಇವರುಗಳು ಆಯ್ಕೆಯಾದರು. ನೂತನ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ, ಸಂಸ್ಥೆಯ ಸದಸ್ಯರುಗಳಿಗೆ, ಸಹಕಾರ ಇಲಾಖೆ ಹಾಗೂ ಸಂಸ್ಥೆಯ ನೌಕರರುಗಳಿಗೆ ಸಹಕಾರ ಭಾರತಿ ಅಭಿನಂದನೆಯನ್ನು ಸಲ್ಲಿಸಿತು. ನೂತನ ಆಡಳಿತ ಮಂಡಳಿ  ಅಧಿಕಾರ ವಹಿಸುವ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ವೀರಪ್ಪ ಅಂಬಾರ್, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ, ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಪಾರಕಟ್ಟೆ, ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ  ನಾರಾಯಣ ಭಟ್ ಕಿದೂರು, ಸಹಕಾರ ಭಾರತಿ ಮಂಜೇಶ್ವರ ತಾಲೂಕು ಅಧ್ಯಕ್ಷ ಅಶೋಕ್ ಬಾಡೂರು, ಸಾಮಾಜಿಕ ಕಾರ್ಯಕರ್ತರಾದ ಸುಬ್ರಾಯ ಹೇರಳ ಹಾಗೂ  ವಿವಿಧ  ಸಹಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries