HEALTH TIPS

ಕಾ ಞÂ ಂಗಾಡ್ ಬ್ಲಾಕ್ ಪಂಚಾಯತ್ ಗೆ ಐ.ಎಸ್.ಒ. ಅಂಗೀಕಾರ ಪ್ರಕಟ


       ಕಾಸರಗೋಡು:  ಪ್ರತಿ ಸ್ಥಳೀಯಾಡಳಿತೆ ಸಂಸ್ಥೆಗಳೂ ತಮ್ಮ ಕರ್ತವ್ಯವನ್ನು ಮಾದರಿ ರೂಪದಲ್ಲಿ ನಡೆಸಿದರೆ ಜನರ ಸಮಸ್ಯೆ ಪರಿಹಾರ ದೂರವಿಲ್ಲ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು. 
      ಕಾ ಞÂ ಂಗಾಡ್ ಬ್ಲಾಕ್ ಪಂಚಾಯತಿ  ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪಂಚಾಯತ್ ಗೆ ಐ.ಎಸ್.ಒ. ಅಂಗೀಕಾರವನ್ನು ಪ್ರಕಟಿಸಿ ಅವರು ಮಾತನಾಡಿದರು.
     ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್  ಜೆಂಡರ್ ರಿಸೋರ್ಸ್ ಸೆಂಟರ್ ಉದ್ಘಾಟಿಸಿದರು. ಪಿ.ಎ.ಯು. ಯೋಜನೆ ನಿರ್ದೇಶಕ ಕೆ.ಪ್ರದೀಪನ್ ಸೂಚಿಕಾ ಇ-ಫೈಲ್ ಸೌಲಭ್ಯ ಉದ್ಘಟಿಸಿದರು. ನವೀಕೃತ ರೆಕಾರ್ಡ್ ಕೊಠಡಿಯನ್ನು ಸಹಾಯಕ ಡೆವೆಲಪ್ ಮೆಂಟ್ ಕಮೀಷನರ್ ಬೆವಿನ್ ಜೋನ್ ವರ್ಗೀಸ್ ಉದ್ಘಾಟಿಸಿದರು.
       ವಿವಿಧ ಗ್ರಾಮಪಂಚಾಯತ್ ಅಧ್ಯಕ್ಷರಾದ ಪಿ.ದಾಮೋದರನ್, ಶಾರದಾ ಎಸ್, ನಾಯರ್, ಕೆ.ಮಹಮ್ಮ???ಲಿ, ಕಾ?ಂಗಾಡ್ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷ ಕರುಣಾಕರನ್ ಕುನ್ನತ್, ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಎಂ.ಕುಂ?ಂಬು, ಇಂದಿರ ಬಾಲನ್, ಝೈನಬಾ, ಸದಸ್ಯ ವಿ.  ಕುಂ ಞÂ ರಾಮನ್ ಮಾಸ್ಟರ್, ಮಹಿಳಾ ಕಲ್ಯಾಣ ಅಧಿಕಾರಿ ಸುರೇಶ್ ಕಸ್ತೂರಿ, ಶುಚಿತ್ವ ಮಿಷನ್ ಸಂಚಾಲಕ ಪಿ.ವಿ.ಜಸೀರ್, ಹೆಡ್ ಕ್ಲರ್ಕ್ ಎಂ.ಜಿತೇಶ್, ವಿವಿಧ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
                     
                               

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries