HEALTH TIPS

ಮುಜುಂಗಾವು ವಿದ್ಯಾಪೀಠದಲ್ಲಿ ಸ್ವಾತಂತ್ರ್ಯ-ರಕ್ಷಾಬಂಧನ ಆಚರಣೆ- ಸಮುಷ್ಟಿಯೇ ನಮ್ಮ ಜೀವಾಳ-ಎಸ್.ಎನ್.ರಾವ್ ಮುನ್ನಿಪ್ಪಾಡಿ

         
        ಕುಂಬಳೆ:  ಮುಜುಂಗಾವಿನ ಶ್ರೀಭಾರತೀವಿದ್ಯಾಪೀಠದಲ್ಲಿ ಸ್ವಾತಂತ್ರ್ಯದಿನಾಚರಣೆ, ರಕ್ಷಾಬಂಧನ, ಕಾರ್ಯಕ್ರಮಗಳನ್ನು ಜೊತೆಯಲ್ಲೇ ಹಮ್ಮಿಕೊಳ್ಳಲಾಯ್ತು. ಮೊದಲಿಗೆ ಶಾಲಾ ಬಯಲಲ್ಲಿ ಸಾಮೂಹಿಕವಾಗಿ ಧ್ವಜವಂದನೆ ಆಚರಿಸಿ ಆ ಬಳಿಕ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನಡೆಯಿತು.  ಮಕ್ಕಳಿಂದ  ದೇಶಭಕ್ತಿಗೀತೆ, ಸಮೂಹಗಾನ, ಭಾಷಣ ಮೊದಲಾದ ಚಟುವಟಿಕೆಗಳು ನಡೆದುವು.    ರಕ್ಷಾಬಂಧನ ಕಾರ್ಯಕ್ರಮದಲ್ಲಿ ವೇದಿಕೆ ಹಾಗೂ ಸಭೆಯಲ್ಲಿ ಪರಸ್ಪರ ರಾಕಿ ಕಟ್ಟುವಮೂಲಕÀ ಸೋದರತ್ವವನ್ನು ಬಿಂಬಿಸಿದರು.
       ವೇದಿಕೆಯಲ್ಲಿ ಶಾಲಾ ಆಡಳಿತಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಅವರು ಅಧ್ಯಕ್ಷತೆ ವಹಿಸಿ ಈ ಸಂದರ್ಭ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಒಮ್ಮತದಿಂದ ಹೋರಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟಂತೆ ಮುಂದೆ ಅದನ್ನು ಕಾಪಾಡಲೂ ಸಮುಷ್ಟಿಯೇ ನಮ್ಮ ಜೀವಾಳ. ಈ ನಿಟ್ಟಿನಲ್ಲಿ ಸೋದರತ್ವದ ಸಂಕೇತವಾದ ರಕ್ಷಾಬಂಧನವೂ ಏಕತೆಯನ್ನೇ ಬಿಂಬಿಸುತ್ತದೆ ಎಂದರು.
    ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಮಾತನಾಡಿ ಶುಭ ಹಾರೈಸಿದರು. ಲಡ್ಡು, ಪೇಡಾ ವಿತರಿಸಲಾಯಿತು. 10ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಶಿಕ್ಷಕ ಹರಿಪ್ರಸಾದ್ ಸ್ವಾಗತಿಸಿ, ಶಿಕ್ಷಕ ದೇವಿಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ  ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries