HEALTH TIPS

ಸೆ.20ರಂದು ಕಾಟುಕುಕ್ಕೆ ಶಾಲೆಯಲ್ಲಿ ಶಂಕರಮೋಹನದಾಸ ಆಳ್ವರ ದ್ವಿತೀಯ ಸಂಸ್ಮರಣೆ, ವೇದಿಕೆ ಅನಾವರಣ ಮತ್ತು ಪುಸ್ತಕ ಬಿಡುಗಡೆ


       ಪೆರ್ಲ:ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ಸೆ.20 ರಂದು ವಿದ್ಯಾ ಸಂಸ್ಥೆಯ ಸ್ಥಾಪಕ ಮುಖ್ಯ ಶಿಕ್ಷಕ ಹಾಗೂ ಸಂಚಾಲಕರಾಗಿದ್ದ  ಶಂಕರಮೋಹನದಾಸ ಆಳ್ವರ ದ್ವಿತೀಯ ಸಂಸ್ಮರಣೆ, ವೇದಿಕೆ ಅನಾವರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
   ಬೆಳಿಗ್ಗೆ 10ಕ್ಕೆ ಪಾಣಾಜೆ ಸುಬೋಧ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷ ಸಿ.ಸಂಜೀವ ರೈ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಮಂತ್ರಿಗಳ ಮಾಜಿ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಅವರು ಶಂಕರಮೋಹನದಾಸ ಆಳ್ವ ವೇದಿಕೆ ಅನಾವರಣ ಗೊಳಿಸುವರು.ಶಾಲೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಸ್ವರ್ಗ ಶಾಲೆ ನಿವೃತ್ತ ಮುಖ್ಯ ಶಿಕ್ಷಕ 'ಶಿವ ಪಡ್ರೆ' ಅವರ ಶ್ರೀ ವಿಷ್ಣು ಚಿಂತನ' , ದೇವಶಂಕರ ಸಂಗ್ರಹ ಪುಸ್ತಕವನ್ನು ಖ್ಯಾತ ಯಕ್ಷಗಾನ ಅರ್ಥದಾರಿ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿ ಹಾಗೂ ನಿವೃತ್ತ ಪ್ರಿನ್ಸಿಪಾಲ್, ಸಾಹಿತಿ ಡಾ.ಬೇ.ಸಿ. ಗೋಪಾಲಕೃಷ್ಣ ಭಟ್ ಪರಿಚಯಿಸಲಿದ್ದು ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಂಚತ್ತಾಯ ಹಾಗೂ ಶಕುಂತಳಾ ಶೆಟ್ಟಿ ಬಿಡುಗಡೆ ಗೊಳಿಸುವರು.
     ಶಿವ ಪಡ್ರೆ ಹಾಗೂ ಬಾಲಚಂದ್ರ ರಾವ್ ಸಾಧನಾ ಪ್ರಕಾಶನ,  ಬೆಂಗಳೂರು ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries