HEALTH TIPS

ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ಸ್ಪರ್ಧಿಸುತ್ತಿರುವ ಕೊಂಡೆವೂರು ವಿದ್ಯಾಪೀಠದ ವಿದ್ಯಾರ್ಥಿಗಳು


     ಉಪ್ಪಳ: ನೆಲ್ಲಿತ್ತರದ ರಾಮದಾಸಸ್ಮಾರಕ ಸರಸ್ವತೀ ವಿದ್ಯಾಮಂದಿರದಲ್ಲಿ ಆ.29 ರಂದು ನಡೆದ ಭಾರತೀಯವಿದ್ಯಾನಿಕೇತನದ ಜಿಲ್ಲಾಮಟ್ಟದ ಶಾಸ್ತ್ರಮೇಳದಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿ ಲೋಹಿತ್ ಟಿ.ಎ. ತ್ರಿಕೋಣಮಿತಿಯಯನ್ನಾಧರಿಸಿದ ಗಣಿತ ಮಾದರಿಯ ನಿರ್ಮಾಣದಲ್ಲಿ ಪ್ರಥಮಸ್ಥಾನವನ್ನು ಹಾಗೂ 9ನೇ ತರಗತಿಯ ವಿದ್ಯಾರ್ಥಿ ಪ್ರದ್ಯೋತ್ ಯನ್ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ವಿಜ್ಞಾನಮಾದರಿ ನಿರ್ಮಾಣದಲ್ಲಿ ಪ್ರಥಮಸ್ಥಾನವನ್ನು ಗಳಿಸಿ ಕೇರಳದ ಕೋಟ್ಟಯಂ ನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಈ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರಾದ  ಶ್ರೀ ಯೋಗಾನಂದಸರಸ್ವತೀ ಸ್ವಾಮೀಜಿಯವರು, ಶಾಲಾ ಆಡಳಿತಮಂಡಳಿ ಹಾಗೂ ಕ್ಷೇಮಸಮಿತಿಯ ಸರ್ವಸದಸ್ಯರು ಹರಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries