ಬದಿಯಡ್ಕ: ಏತಡ್ಕದ ವಿಜಯಲಕ್ಷ್ಮಿ ಕಟ್ಟದಮೂಲೆ ಅವರ ಚೊಚ್ಚಲ ಕೃತಿ "ಕಥಾನಾಯಕಿ"ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮವು ಜ.4ರಂದು ಪೂರ್ವಾಹ್ನ 10ಕ್ಕೆ ಲೇಖಕಿಯ ಸ್ವಗೃಹ ಕಟ್ಟದಮೂಲೆ "ನರಹರಿನಿಲಯ"ದಲ್ಲಿ ಜರಗಲಿದೆ. ಹಿರಿಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಅವರು ಕೃತಿ ಬಿಡುಗಡೆ ಮಾಡಲಿರುವರು.ಹಿರಿಯ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಸಾಹಿತಿ ಡಾ.ಬೇ.ಸೀ ಗೋಪಾಲಕೃಷ್ಣ ಭಟ್ ಕೃತಿ ಪರಿಚಯ ಮಾಡುವರು. ಈ ಸಂದರ್ಭದಲ್ಲಿ ಭಾವಗೀತೆಗಳ ಗಾಯನವೂ ನಡೆಯಲಿದೆ.
ಜ.4 ರಂದು ಕೃತಿ ಬಿಡುಗಡೆ
0
January 01, 2020
ಬದಿಯಡ್ಕ: ಏತಡ್ಕದ ವಿಜಯಲಕ್ಷ್ಮಿ ಕಟ್ಟದಮೂಲೆ ಅವರ ಚೊಚ್ಚಲ ಕೃತಿ "ಕಥಾನಾಯಕಿ"ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮವು ಜ.4ರಂದು ಪೂರ್ವಾಹ್ನ 10ಕ್ಕೆ ಲೇಖಕಿಯ ಸ್ವಗೃಹ ಕಟ್ಟದಮೂಲೆ "ನರಹರಿನಿಲಯ"ದಲ್ಲಿ ಜರಗಲಿದೆ. ಹಿರಿಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಅವರು ಕೃತಿ ಬಿಡುಗಡೆ ಮಾಡಲಿರುವರು.ಹಿರಿಯ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಸಾಹಿತಿ ಡಾ.ಬೇ.ಸೀ ಗೋಪಾಲಕೃಷ್ಣ ಭಟ್ ಕೃತಿ ಪರಿಚಯ ಮಾಡುವರು. ಈ ಸಂದರ್ಭದಲ್ಲಿ ಭಾವಗೀತೆಗಳ ಗಾಯನವೂ ನಡೆಯಲಿದೆ.