HEALTH TIPS

ಇಂದು ಸುರಕ್ಷೆ ಜಾಗೃತಿ ಕಾರ್ಯಕ್ರಮ


        ಕಾಸರಗೋಡು: ವಯರ್ ಮ್ಯಾನ್ ಗಳು ಮತ್ತು ನೂತನವಾಗಿ ಈ ವಲಯಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಂದಿಗಾಗಿ ಇಲೆಕ್ಟ್ರಿಕಲ್ ಇನ್ಸ್ ಸ್ಪೆಕ್ಟರೇಟ್ ಇಲಾಖೆ ವತಿಯಿಂದ  ಸುರಕ್ಷೆ ಜಾಗೃತಿ ಕಾರ್ಯಕ್ರಮ ಇಂದು(ಜ.23) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.  ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಮಭವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಇಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಎನ್.ಕೆ. ಸುನಿಲ್ ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಪ್ರಥಮ ಚಿಕಿತ್ಸೆ ಎಂಬ ವಿಷಯದಲ್ಲಿ ಜ್ಯೂನಿಯರ್ ಮೆಡಿಕಲ್ ಮನ್ಸಲ್ಟೆಂಟ್ ಡಾ.ಎಸ್.ಅನೂಪ್, ಸುರಕ್ಷೆ ಜಾಗೃತಿ ಎಂಬ ವಿಷಯದಲ್ಲಿ ಸಹಾಯಕ ಇಲೆಕ್ಟರಿಕಲ್ ಇನ್ಸ್ ಸ್ಪೆಕ್ಟರರಾದ ಕೆ.ಎಂ.ಷಾಹುಲ್ ಹಮೀದ್, ಟಿ.ಕೆ.ಆನಂದ್, ಪ್ರಾಯೋಗಿಕ ಪರಿಣತಿ ಎಂಬ ವಿಷಯದಲ್ಲಿ ಸ್ಕಿಲ್ ಅಸಿಸ್ಟೆಂಟ್ ವಿ.ಕೆ.ಸುಂದರ್ ತರಗತಿ ನಡೆಸುವರು. ಕೆ.ಎಸ್.ಇ.ಬಿ. ಡೆಪ್ಯೂಟಿ ಚೀಫ್ ಇಂಜಿನಿಯರ್ ಪಿ.ಸುರೇಂದ್ರ, ಡೆಪ್ಯೂಟಿ ಇಲೆಕ್ಟ್ರಿಕಲ್ ಇನ್ಸ್ ಸ್ಪೆಕ್ಟರ್ ಎ.ಪೂರ್ಣಿಮಾ, ಸಿ.ಪ್ರಕಶನ್(ಇಲೆಕ್ಟ್ರಿಕಲ್ ಇನ್ಸ್ ಸ್ಪೆಕ್ಟರೇಟ್) ಮೊದಲಾದವರು ಉಪಸ್ಥಿತರಿರುವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries