HEALTH TIPS

ಪೆÇಸಡಿಗುಂಪೆ ಶಂಕರ ಧ್ಯಾನ ಮಂದಿರದಲ್ಲಿ ಸೇವಾ ಅಘ್ರ್ಯ ಕಾರ್ಯಕ್ರಮ

 
    ಕುಂಬಳೆ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲುವಿನ ಗೋವುಗಳ ಮೇವಿಗಾಗಿ ಮುಳಿಹುಲ್ಲು ಸಂಗ್ರಹಿಸುವ ಶ್ರಮದಾನವು ಪೆÇಸಡಿ ಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ  ಇತ್ತೀಚೆಗೆ ನಡೆಯಿತು.
      ಗುಂಪೆ ವಲಯ ಬಿಂದು-ಸಿಂಧು ಪ್ರಧಾನ ಶಂಕರನಾರಾಯಣ ಗುಂಪೆ ಧ್ವಜಾರೋಹಣಗೈದರು. ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಮುಖ ಗುರುಮೂರ್ತಿ ಮೇಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಜಕೂಡ್ಲು ಗೋ ಶಾಲೆ ಸಹಕಾರ್ಯದರ್ಶಿ ಗಣರಾಜ ಕಡಪ್ಪು ಈ ವೇಳೆ ಉಪಸ್ಥಿತರಿದ್ದರು. ಬಳಿಕ ಬಜಕೂಡ್ಲು ಗೋಶಾಲೆಯ ಗೋವುಗಳಿಗಾಗಿ ಗೋ ಸೇವಕರು ಮೇವು ಸಂಗ್ರಹಿಸಿದರು. ಬೆತ್ತಕಾಡು ಪರಮೇಶ್ವರಿ ಅಮ್ಮ ಅವರು ಗೋ ಸೇವಕರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಸಂಗ್ರಹಿಸಿದ ಮುಳಿಹುಲ್ಲನ್ನು ಗೋ ಶಾಲಾ ಸಮಿತಿಯವರು ಬಜಕೂಡ್ಲು ಗೋ ಶಾಲೆಗೆ ಸಾಗಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries