HEALTH TIPS

ಎಡನಾಡು ಕಣ್ಣೂರು ಸೇವಾ ಸಹಕಾರಿ ಬೇಂಕ್ ಕಾರ್ಯದರ್ಶಿಗೆ ಬೀಳ್ಕೊಡುಗೆ ಸಮಾರಂಭ- 32 ವರ್ಷಗಳ ಕಾಲ ಸ್ತುತ್ಯರ್ಹ ಸೇವೆಗೈದ ಎ.ಕೃಷ್ಣ ಭಟ್


            ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನಲ್ಲಿ ತನ್ನ ಸುದೀರ್ಘ 37 ವರ್ಷಗಳ ಸೇವೆಯನ್ನುಗೈದು ಫೆ.29ರಂದು ನಿವೃತ್ತರಾದ ಕಾರ್ಯದರ್ಶಿ ಎ.ಕೃಷ್ಣ ಭಟ್ ಅವರಿಗೆ ಬ್ಯಾಂಕಿನ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮನ್ವಯ ಸಹಕಾರಿ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಪಿ.ಜಯಂತ ಪಾಟಾಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಕಾರಿ ಇನ್ಸ್‍ಪೆಕ್ಟರ್ ಸುನಿಲ್ ಕುಮಾರ್, ಸಹಕಾರ ಭಾರತಿಯ ರಾಜ್ಯ ಸಮಿತಿ ಸದಸ್ಯ ಪಿ. ಐತ್ತಪ್ಪ ಮವ್ವಾರು, ಕ್ಯಾಂಪೆÇ್ಕೀ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಎಡನಾಡು ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ, ಬ್ಯಾಂಕಿನ ಮಾಜಿ ಅಧ್ಯಕ್ಷರುಗಳಾದ ಯಚ್. ಶಿವರಾಮ ಭಟ್, ಪಿ.ಜಿ. ಸುಬ್ರಹ್ಮಣ್ಯ ಹೆಬ್ಬಾರ್, ಹಾಗೂ ಯಸ್.ಗೋಪಾಲಕೃಷ್ಣ ಭಟ್ ಶುಭಹಾರೈಸಿದರು. ವೆಂಕಪ್ಪ ಭಟ್ ಸ್ವಾಗತಿಸಿ, ಲಕ್ಷ್ಮೀ ಭಟ್ ವಂದಿಸಿದರು. ಯಚ್. ರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries