HEALTH TIPS

ಇತರ ರಾಜ್ಯಗಳ ಕಾರ್ಮಿಕರನ್ನು ಕಳುಹಿಸಲು ಒತ್ತಡ ಬೇಡ-ಮುಖ್ಯ ಕಾರ್ಯದರ್ಶಿ

     
           ತಿರುವನಂತಪುರ: ಇತರ ರಾಜ್ಯಗಳ ಕಾರ್ಮಿಕರನ್ನು ಒತ್ತಡಹೇರಿ ಅವರ ಊರಿಗೆ ಕಳುಹಿಸಬೇಕಾಗಿಲ್ಲ ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಾಂ ಜೋಸ್ ತಿಳಿಸಿದ್ದಾರೆ. ತಮ್ಮೂರಿಗೆ ಮರಳಲೇ ಬೇಕೆಂದು ಹಟ ಹಿಡಿದ ಇತರ ರಾಜ್ಯಗಳ ಕಾರ್ಮಿಕರನ್ನು ಮಾತ್ರ ತೆರಳಲು ಅವಕಾಶ ನೀಡಿದರೆ ಸಾಕು. ಕೇರಳ ರಾಜ್ಯದಲ್ಲೇ ಇರಲು ಬಯಸುವವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಈ ವಿಚಾರವನ್ನು ಪೆÇಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಗಮನಿಸಬೇಕು.  ಊರಿಗೆ ತೆರಳಲು ಮನಸ್ಸಿಲ್ಲದೇ ಇರುವವರನ್ನೂ ಕೆಲವೆಡೆ ಊರಿಗೆ ತೆರಳುವಂತೆ ಒತ್ತಾಯಿಸಲಾಗುತ್ತಿದೆ ಎಂಬ ದೂರುಗಳು ಲಭಿಸಿದ ಹಿನ್ನೆಲೆಯಲ್ಲಿ ಈ ಆದೇಶಪ್ರಕಟಿಸಲಾಗಿದೆ.
         ಇತರ ರಾಜ್ಯಗಳ ಕಾರ್ಮಿಕರನ್ನು ಕೇರಳದಿಂದ ರೈಲಿನ ಮೂಲಕ ಕಳುಹಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಮೊದಲ ರೈಲಿನಲ್ಲಿ ಒಡಿಶಾಕ್ಕೆ 1200 ಮಂದಿ ಮರಳಿದ್ದಾರೆ. ಲಾಕ್ ಡೌನ್ ಆದೇಶ ಕೊನೆಗೊಳ್ಳುವ ವೇಳೆ ಕಟ್ಟಡನಿರ್ಮಾಣ ಸಹಿತ ಕಾಯಕಗಳು ಮತ್ತೆ ಸಕ್ರಿಯಗೊಳ್ಳಲಿದೆ ಎಂದು ಪ್ರಧಾನ ಕಾರ್ಯದರ್ಶಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries