HEALTH TIPS

ವೀಣಾ ಪಿಣರಾಯಿ ವಿವಾಹ-ರಾಹುಲ್ ಈಶ್ವರ್ ರಂಗಕ್ಕೆ- ವಿವಾಹದಂತಹ ಶುಭ ಸಂಭ್ರಮವನ್ನು ಟ್ರೋಲ್ ಮೂಲಕ ಹಾಸ್ಯ ಮಾಡುವುದು ಭಾರತೀಯ ಸಂಸ್ಕøತಿ ಅಲ್ಲ-ಅದು ವಿಕೃತಿ-ರಾಹುಲ್ ಈಶ್ವರ್

              ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಮತ್ತು ಡಿವೈಎಫ್‍ಐ ಅಖಿಲ ಭಾರತ ಅಧ್ಯಕ್ಷ ಮೊಹಮ್ಮದ್ ರಿಯಾಸ್ ಅವರಿಗೆ ಅಭಿನಂದನೆಗಳು. ಅವರ ವಿವಾಹದ ಸುದ್ದಿ ಬಹಿರಂಗವಾದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿರುವ ಅಪಹಾಸ್ಯ, ಟ್ರೋಲ್ ಭಾರತೀಯ ಸಂಸ್ಕøತಿಗೆ ಎಸೆದ ಅಪಮಾನ ಎಂದು ಖ್ಯಾತ ಚಿಂತಕ, ವಾಗ್ಮಿ ರಾಹುಲ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ. ಅವರು ತಮ್ಮ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಮದುವೆ ಬಗ್ಗೆ ಎದ್ದಿರುವ ಭಾರೀ ಟ್ರೋಲ್ ಗಳು  ಭಾರತೀಯ ಸಂಸ್ಕೃತಿಯ ಪ್ರತೀಕವಲ್ಲ. ಇದು ಸಂಸ್ಕøತಿಯ ವಿಕೃತಿ ಎಂದು ತಿಳಿಸಿದ್ದಾರೆ.
           ಕೆಲವರು ವಾಟ್ಸಾಪ್ ಮತ್ತು ಫೇಸ್‍ಬುಕ್ ಮೂಲಕ ವೀಣಾ ಮತ್ತು ರೀಯಾಸ್ ಅವರ ವೈಯುಕ್ತಿಕ ಜೀವನ ಮತ್ತು ವಿವಾಹದ ಬಗ್ಗೆ ಟ್ರೋಲ್ ಮಾಡುತ್ತಿರುವುದನ್ನು ತಾನು ಗಮನಿಸಿರುವೆ ಎಂದು ರಾಹುಲ್ ಹೇಳಿರುವ ರಾಹುಲ್ ಈಶ್ವರ ಕಷ್ಟ...ಭಾರೀ ಕಷ್ಟ ಇದೆ. ರಾಜಕೀಯವು ರಾಜಕೀಯವಾಗಿರಬೇಕು. ಹೊರತು ರಾಜಕೀಯ ಆಭಾಸ ಆಗಬಾರದು ಎಂದು ರಾಹುಲ್ ಈಶ್ವರ್ ನೆನಪಿಸಿದರು.
          ಮದುವೆಯ ಪ್ರತಿಯೊಬ್ಬ ವ್ಯಕ್ತಿಯ ತೀರಾ ಖಾಸಗೀ ವಿಷಯವಾಗಿರುತ್ತದೆ. ಜೊತೆಗೆ ಪ್ರತಿಯೊಬ್ಬನಿಗೂ ಪ್ರಮುಖ ಮತ್ತು ರೋಮಾಂಚನಕಾರಿ ಕ್ಷಣವಾಗಿದೆ. ಮದುವೆಗೆ ಟ್ರೋಲ್ ಮಾಡುವುದು ಭಾರತದ ಸಂಸ್ಕೃತಿಯಲ್ಲ ಎಂದು ರಾಹುಲ್ ಈಶ್ವರ್ ತಿಳಿಸಿರುವರು. ರಿಯಾಜ್ ಮತ್ತು ವೀಣಾ ಅವರಿಬ್ಬರನ್ನೂ ಪರಿಚಯ ತನಗಿದೆ. ಮತ್ತು ಇಬ್ಬರೂ ತುಂಬಾ ಒಳ್ಳೆಯ ಜನರು ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ. "ಇಬ್ಬರ ನೆಮ್ಮದಿಗೂ ದೇವರಲ್ಲಿ ಸಂಪ್ರಾಪ್ತಿಸುತ್ತೇನೆ. ದೇವರು ಹೊಸ ಬದುಕಿನ ನೇಗಿಲು ಹೊತ್ತವರನ್ನು  ಆಶೀರ್ವದಿಸಲಿ ಎಂದು ರಾಹುಲ್ ಬರೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries