HEALTH TIPS

ಹಠಾತ್ ಮಹತ್ತರ ನಿರ್ಧಾರ-ಸದ್ಯ ದೂರ ಪ್ರಯಾಣ ಬಸ್ ಸಂಚಾರ ಇಲ್ಲ

 
            ತಿರುವನಂತಪುರ: ಕೋವಿಡ್ ನಿಯಂತ್ರಣಗಳ ಭಾಗವಾಗಿ ಸ್ಥಗಿತಗೊಂಡಿದ್ದ ಕೆಎಸ್‍ಆರ್‍ಟಿಸಿಯ ದೂರದ ಪ್ರಯಾಣದ ಸೇವೆಗಳನ್ನು ಶನಿವಾರದಿಂದ ಪುನರಾರಂಭಿಸುವ ನಿರ್ಧಾರದಿಂದ ಸರ್ಕಾರ ಹಠಾತ್ ಹಿಂದೆ ಸರಿದಿದೆ. ರಾಜ್ಯ ಸಾರಿಗೆ ಸಚಿವ ಎ.ಕೆ.ಶಶೀಂದ್ರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡುವಿನ ಶುಕ್ರವಾರದ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
            ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ನೀಡಿರುವ ಎಚ್ಚರಿಕೆಗಳನ್ನು ಪರಿಶೀಲಿಸಿದ ಬಳಿಕ ದೂರದ ಸೇವೆಗಳನ್ನು ಪ್ರಾರಂಭಿಸಬೇಕು ಎಂದು ಚರ್ಚೆಯಲ್ಲಿ ನಿರ್ಧರಿಸಲಾಯಿತು. ಕೋವಿಡ್ ಬಾಧಿತರ ಸಂಖ್ಯೆ ಮತ್ತು ಸಾವುಗಳು ಪ್ರತಿದಿನವೂ ವರದಿಯಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
            ರಾಜ್ಯದ ಅನೇಕ ಜಿಲ್ಲಾ ಕೇಂದ್ರಗಳು ಕಂಟೋನ್ಮೆಂಟ್ ವಲಯದಲ್ಲಿವೆ. ಪ್ರಸ್ತುತ 498 ಹಾಟ್‍ಸ್ಪಾಟ್‍ಗಳಿವೆ. ಹಲವಾರು ಉದ್ಯೋಗಿಗಳಿಗೆ ಈಗಾಗಲೇ ದೃಢಪಡಿಸಲಾಗಿದ್ದು ಆರೋಗ್ಯ ಇಲಾಖೆ ನೀಡಿದ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. 
       ಪ್ರಸ್ತುತ ಪರಿಸ್ಥಿತಿಯಲ್ಲಿ ದೂರದ ಪ್ರಯಾಣ ಸೇವೆಗಳನ್ನು ಪ್ರಾರಂಭಿಸುವುದರಿಂದ ತೀತ್ರ ಸಮಸ್ಯೆಗಳು ಎದುರಾಗಲಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ನಿರ್ಧಾರವನ್ನು ವಿವರಿಸಿದ ಸಾರಿಗೆ ಸಚಿವರು, ರೋಗಿಗಳ ಸಂಖ್ಯೆ ಹೆಚ್ಚಾದರೆ ಜಿಲ್ಲೆಗಳೊಳಗಿನ ಸೇವೆಗಳನ್ನು ನಿಲ್ಲಿಸಬೇಕಾಗುತ್ತದೆ. ಜನರು ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯನ್ನು ಜನರು ಅರ್ಥಮಾಡಿಕೊಳ್ಳಬೇಕು. ಸಂಪರ್ಕ ರೋಗಿಗಳ ಸಂಖ್ಯೆ ಮತ್ತು ಹಾಟ್‍ಸ್ಪಾಟ್‍ಗಳ ಸಂಖ್ಯೆಯ ಹೆಚ್ಚಳ ಬಸ್ ಸೇವೆಯನ್ನು ಪ್ರಾರಂಭಿಸಲು ಸವಾಲಾಗಿದೆ ಎಂದು ಸಚಿವರು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries