HEALTH TIPS

ನಿಬಂಧನೆಗನುಸಾರ ರಾಜ್ಯ ರಸ್ತೆಸಾರಿಗೆ ಪುನರಾರಂಭ ಸೂಚನೆ ನೀಡಿದ ಸಿಎಂ

            ತಿರುವನಂತಪುರ: ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ಕೆ.ಎಸ್. ಆರ್. ಟಿ. ಸಿ ಯ ದೂರದ ಸೇವೆಗಳನ್ನು ರಾಜ್ಯದಲ್ಲಿ ಪುನರಾರಂಭಿಸಲು ಸರ್ಕಾರ ಸಜ್ಜಾಗಿದೆ. ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಸೇವೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಸ್ಪಷ್ಟಪಡಿಸಿದರು. ಕೋವಿಡ್ ಪರಿಶೀಲನಾ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿ ಮಾತನಾಡಿದರು.  ಈ ಹಿಂದೆ, ಕೆಎಸ್‍ಆರ್‍ಟಿಸಿಗೆ ಜಿಲ್ಲೆ-ಅಂತರ್ ಜಿಲ್ಲೆ ಸೇವೆಗಳಿಗೆ ಅವಕಾಶ ನೀಡಲಾಗಿತ್ತು. 
           ರಾಜ್ಯದಲ್ಲಿ ಕೋವಿಡ್ ಬಾಧಿತರು ಮನೆಯಲ್ಲಿ ನಿಗಾ ವಹಿಸಬಹುದು ಎಂದು ತಜ್ಞರ ಸಮಿತಿ ನಿರ್ದೇಶಿಸಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಮೊದಲ ಹಂತದಲ್ಲಿ, ಸೋಂಕಿತ ಆರೋಗ್ಯ ಕಾರ್ಯಕರ್ತರಿಗೆ ಈ ರೀತಿ ಚಿಕಿತ್ಸೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಯಾರನ್ನೂ ಮನೆಯಲ್ಲಿ ಕ್ವಾರಂಟೈನ್ ಗೆ ಒತ್ತಾಯಿಸಲಾಗುವುದಿಲ್ಲ.
       ತುರ್ತು ಚಿಕಿತ್ಸೆಯ ಅಗತ್ಯವಿಲ್ಲದವರಿಗೆ ಈ ವಿಧಾನವನ್ನು ನೀಡಲಾಗುತ್ತದೆ. ರೋಗವನ್ನು ಇತರರಿಗೆ ಹರಡದ ಕಾರಣ ಅವುಗಳನ್ನು ಸಿಎಲ್‍ಟಿಎಫ್‍ಸಿಯಲ್ಲಿ ಇರಿಸಲಾಗುತ್ತದೆ. ನೀವು ಮನೆಯಲ್ಲಿಯೇ ಇರಬಹುದೆಂದು ಜಾಗ್ರತೆ ವಹಿಸಿದಲ್ಲಿ ಸಮಸ್ಯೆಗಳು ಎದುರಾಗದು. ಯಾವುದೇ ಕಾರಣಕ್ಕೂ ಆರೋಗ್ಯ ಪರೀಕ್ಷೆಗಳನ್ನು ಕೈಗೊಳ್ಳದಿರಬಾರದು. ಲಕ್ಷಣಗಳಿಲ್ಲದವರಿಗೆ ಮಾತ್ರ ಮನೆ ಆರೈಕೆ ಹಾಗೂ ಕ್ವಾರಂಟೈನ್ ಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
         ದೂರವಾಣಿ ಮೂಲಕ ವಿಚಾರಣೆ, ಸ್ವ-ಚಿಕಿತ್ಸೆ ಮತ್ತು ವರದಿ ಮಾಡುವುದು, ಮನೆಯ ಕ್ವಾರಂಟೈನ್ ನಲ್ಲಿ ಫಿಂಗರ್ ಪಲ್ಸ್ ಆಕ್ಸಿಮೆಟ್ರಿ ಮುಖ್ಯವಾಗಿದೆ. ಮೂರು ಹಂತದ ಮಾನಿಟರಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ಹೇಳಿದರು. ಮನೆ ಪರಿಸರ ನಿಯಂತ್ರಣದ  ಬಗ್ಗೆ ಆಸಕ್ತಿ ಇರುವವರು ತಮ್ಮ ಒಪ್ಪಿಗೆ ನೀಡಬೇಕು ಎಂದು ಸಿಎಂ ಹೇಳಿದರು.
        ಯಾವುದೇ ಪ್ರತಿಭಟನೆ-ಪ್ರದರ್ಶನಗಳು ಇಲ್ಲ:
   ಕೋವಿಡ್ ನಿಯಂತ್ರಣಗಳ ಕೊನೆಯವರೆಗೂ ಮುಷ್ಕರಗಳನ್ನು ಅನುಮತಿಸಲಾಗುವುದಿಲ್ಲ. ಜೊತೆಗೆ ಸಾರ್ವಜನಿಕ ಪ್ರದರ್ಶನಗಳಿಗೂ ಇದು ಅನ್ವಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
           ಜೊತೆಗೆ  ಆನ್‍ಲೈನ್ ತರಗತಿಗಳ ಸಮಯವನ್ನು ನಿಗದಿಪಡಿಸಬೇಕು ಎಂದು ಸಿಎಂ ಹೇಳಿದರು.  ಸರ್ಕಾರಿ  ಶಾಲೆಗಳನ್ನು ಹೊರತುಪಡಿಸಿ ಖಾಸಗೀ ಮತ್ತು ಕೆಲವು ಅನುದಾನಿತ ಶಾಲೆಗಳಲ್ಲಿ ಸುಧೀರ್ಘ ಅವಧಿಗಳ ತರಗತಿಗಳು ನಡೆಯುತ್ತಿವೆ. ಆನ್‍ಲೈನ್ ತರಗತಿಗಳು ಏಳು ಗಂಟೆಗಳವರೆಗೆ ನಡೆಯುತ್ತಿವೆ. ಇದು ಮಕ್ಕಳ ಜೀವನವನ್ನು ಕಷ್ಟಕರವಾಗಿಸುತ್ತಿದೆ ಎಂದು ಸಿಎಂ ಹೇಳಿದರು.
      ಕೋವಿಡ್ ಸೋಂಕು ಗುರುವಾರ ರಾಜ್ಯದ 506 ಜನರಲ್ಲಿ ದೃಢಪಡಿಸಲಾಗಿದೆ. 794 ರೋಗಿಗಳನ್ನು ಗುಣಪಡಿಸಲಾಗಿದೆ. ಈ ಪೈಕಿ 375 ಮಂದಿ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದರು. ಮೂಲ ತಿಳಿದಿಲ್ಲದ 29 ಪ್ರಕರಣಗಳಿವೆ. ತಾಂತ್ರಿಕ ಅಡಚಣೆಯಿಂದ ಫಲಿತಾಂಶ ಗುರುವಾರದ ಫಲಿತಾಂಶ ಅಪೂರ್ಣ. ಇತರ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಸಿಎಂ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries