ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 172 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ಸಂದರ್ಭದಲ್ಲಿ 260 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 172 ಮಂದಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ.ವಿ.ರಾಮದಾಸ್ ತಿಳಿಸಿದ್ದಾರೆ.
ರೋಗ ಬಾಧಿತರು : ವಲಿಯಪರಂಬ-2, ಈಸ್ಟ್ ಎಳೇರಿ-1, ಅಜಾನೂರು-15, ಪಳ್ಳಿಕರೆ-6, ಉದುಮ-19 ಬೇಡಡ್ಕ-7, ಮಧೂರು-5, ಕಾಂಞಂಗಾಡ್-7, ಕಾಸರಗೋಡು-9, ಪುಲ್ಲೂರು-1, ಕೋಡೋಂ ಬೇಳೂರು-2, ಮಂಗಲ್ಪಾಡಿ-3, ಬದಿಯಡ್ಕ-5, ಮಂಜೇಶ್ವರ-2, ಪಡನ್ನ-4, ಪೈವಳಿಕೆ-1, ಚೆಮ್ನಾಡ್-16, ಮುಳಿಯಾರು-6, ಮೊಗ್ರಾಲ್ಪುತ್ತೂರು-3, ವರ್ಕಾಡಿ-1, ಪಿಲಿಕೋಡ್-6, ಚೆಂಗಳ-12, ನೀಲೇಶ್ವರ-2, ಚೆರ್ವತ್ತೂರು-17, ಕಲ್ಲಾರ್-1, ತೃಕ್ಕರಿಪುರ-8, ಎಣ್ಮಕಜೆ-3, ಕುತ್ತಿಕ್ಕೋಲ್-2, ಪುತ್ತಿಗೆ-2, ಕುಂಬಳೆ-3, ಮೀಂಜ-2, ದೇಲಂಪಾಡಿ-1 ಎಂಬಂತೆ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ 5132 ಜನರು ಕ್ವಾರಂಟೈನ್ ನಲ್ಲಿ:
ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವವರ 5132 ಮಂದಿ ಇದ್ದು, ಮನೆಗಳಲ್ಲಿ 3946 ಮತ್ತು ಸಂಸ್ಥೆಗಳಲ್ಲಿ 1186 ಗಳಲ್ಲಿರುವರು. ಹೊಸದಾಗಿ ಸೇರಿಸಲಾದ 291 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 1288 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 267 ಮಂದಿಗಳ ಪರೀಕ್ಷಾ ಫಲಿತಾಂಶಗಳನ್ನು ಪಡೆಯಬೇಕಾಗಿದೆ.
74 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ 158 ಜನರನ್ನು ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯಲ್ಲಿ 7422 ಪ್ರಕರಣಗಳನ್ನು ದೃಢಪಡಿಸಿದ್ದಾರೆ. ಈ ಪೈಕಿ 621 ಮಂದಿ ವಿದೇಶದಿಂದ ಬಂದವರು, 461 ಮಂದಿ ಇತರ ರಾಜ್ಯಗಳವರು ಮತ್ತು 6340 ಮಂದಿ ಸಂಪರ್ಕದ ಮೂಲಕ ದೃಢಪಟ್ಟಿದೆಈವರೆಗೆ 5582 ಜನರು ಕೋವಿಡ್ ಋಣಾತ್ಮಕ ಎಂದು ಕಂಡುಬಂದಿದೆ. ಕೋವಿಡ್ನಿಂದ ಸಾವನ್ನಪ್ಪಿದವರ ಸಂಖ್ಯೆ 58 ಕ್ಕೆ ಏರಿದೆ. ಪ್ರಸ್ತುತ 1782 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದಲ್ಲಿ 3215 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಮಂಗಳವಾರ 3215 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 2532 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಸಾವಿಗೆ ಕೊರೊನಾ ಕಾರಣವೆಂಬುದಾಗಿ ಖಾತರಿಯಾಗಿದೆ. 3013 ಮಂದಿಗೆ ಸಂಪರ್ಕದ ಮೂಲಕ ರೋಗ ಬಾ„ಸಿದೆ. 89 ಮಂದಿ ಆರೋಗ್ಯ ಕಾರ್ಯಕರ್ತರಿಗೂ ರೋಗ ಬಾಧಿಸಿದೆ.
ರೋಗ ಬಾಧಿತರು : ಮಲಪ್ಪುರಂ-348, ಕಲ್ಲಿಕೋಟೆ-260, ತಿರುವನಂತಪುರ-656, ಎರ್ನಾಕುಳಂ-239, ಕಣ್ಣೂರು-213, ಪಾಲ್ಘಾಟ್-136, ತೃಶ್ಶೂರು-188, ಕೊಲ್ಲಂ-234, ಕೋಟ್ಟಯಂ-192, ಆಲಪ್ಪುಳ-338, ಇಡುಕ್ಕಿ-29, ಕಾಸರಗೋಡು-172, ವಯನಾಡು-64, ಪತ್ತನಂತಿಟ್ಟ-146 ಎಂಬಂತೆ ರೋಗ ಬಾಧಿಸಿದೆ.
Àುುಕ್ತ : ತಿರುವನಂತಪುರ-268, ಕೊಲ್ಲಂ-151, ಪತ್ತನಂತಿಟ್ಟ-122, ಆಲಪ್ಪುಳ-234, ಕೋಟ್ಟಯಂ-138, ಇಡುಕ್ಕಿ-43, ಎರ್ನಾಕುಳಂ-209, ತೃಶ್ಶೂರು-120, ಪಾಲ್ಘಾಟ್-120, ಮಲಪ್ಪುರಂ-303, ಕಲ್ಲಿಕೋಟೆ-306, ವಯನಾಡು-32, ಕಣ್ಣೂರು-228, ಕಾಸರಗೋಡು-260 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 31156 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 82,345 ಮಂದಿ ಗುಣಮುಖರಾಗಿದ್ದಾರೆ.


