HEALTH TIPS

ಕೇರಳದಲ್ಲಿ ಇಂದು 3215 ಮಂದಿಗೆ ಕೋವಿಡ್- 2532 ಮಂದಿ ಗುಣಮುಖ

     ತಿರುವನಂತಪುರ: ತೀವ್ರ ಜಾಗೃತಿ ಮುಂದುವರೆದಂತೆ, ಕೇರಳದಲ್ಲಿ ಇಂದು  3215 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. 3013 ಮಂದಿಗೆ ಸಂಪರ್ಕದ ಮೂಲಕ ಕೋವಿಡ್ ಬಾಧಿಸಿದೆ. 2515 ಜನರನ್ನು ಗುಣಪಡಿಸಲಾಗಿದೆ. ಇಂದಿನ ಬಾಧಿತರಲ್ಲಿ 313 ಮಂದಿಗಳ ಸೋಂಕಿನ ಮೂಲ ಸ್ಪಷ್ಟವಾಗಿಲ್ಲ. 12 ಕೋವಿಡ್ ಸಾವುಗಳು ಇಂದು ದೃಢಪಡಿಸಲಾಗಿದೆ. 

      ಜಿಲ್ಲಾವಾರು ಸೋಂಕು ಬಾಧಿತರ ವಿವರ: 

  ಕೋವಿಡ್ ಬಾಧಿತರಲ್ಲಿ ಒಟ್ಟು 31,156 ಜನರು ಚಿಕಿತ್ಸೆಯಲ್ಲಿದ್ದಾರೆ. ಈವರೆಗೆ 82,345 ಜನರನ್ನು ಗುಣಪಡಿಸಲಾಗಿದೆ. ಇಂದು 89 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 617 ಕ್ಕೆ ಏರಿದೆ.

       ತಿರುವನಂತಪುರದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದು 656 ಮಂದಿಗೆ ದೃಢೀಕರಿಸಲಾಗಿದೆ. ಮಲಪ್ಪುರಂ 348, ಆಲಪ್ಪುಳ 338, ಕೋಝಿಕ್ಕೋಡ್ 260, ಎರ್ನಾಕುಳಂ 239, ಕೊಲ್ಲಂ 234, ಕಣ್ಣೂರು 213, ಕೊಟ್ಟಾಯಂ 192, ತ್ರಿಶೂರ್ 188, ಕಾಸರಗೋಡು 172, ಪತ್ತನಂತಿಟ್ಟು 146, ಪಾಲಕ್ಕಾಡ್ 136, ವಯನಾಡ್ 29, ಇಡುಕ್ಕಿ 29 ಮಂದಿಗಳಿಗೆ ಕೋವಿಡ್ ಪಾಸಿಟಿವ್ ಆಗಿರುವುದು ದೃಢಪಡಿಸಲಾಗಿದೆ. 

          ಕೋವಿಡ್ ನೆಗೆಟಿವ್ ವಿವರಗಳು: 

   ಚಿಕಿತ್ಸೆಗೆ ಒಳಗಾಗಿರುವ 2532 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದು ಸರ್ಕಾರ ತಿಳಿಸಿದೆ.  ತಿರುವನಂತಪುರ 268, ಕೊಲ್ಲಂ 151, ಪತ್ತನಂತಿಟ್ಟು  122, ಆಲಪ್ಪುಳ 234, ಕೊಟ್ಟಾಯಂ 138, ಇಡಕ್ಕಿ 43, ಎರ್ನಾಕುಳಂ 209, ತ್ರಿಶೂರ್ 120, ಪಾಲಕ್ಕಾಡ್ 120, ಮಲಪ್ಪುರಂ 303, ಕೋಝಿಕ್ಕೋಡ್ 306, ವಯನಾಡ್ 32, ಕಣ್ಣೂರು 228 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿದೆ. 

        12 ಕೋವಿಡ್ ಮರಣ: 

    ಇಂದು ಕೋವಿಡ್ ಬಾಧಿಸಿ  12 ಮಂದಿ ಮರಣ ಪಟ್ಟಿರುವುದು ದೃಢಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವಿನ ಸಂಖ್ಯೆ 466 ಕ್ಕೆ ತಲುಪಿದೆ. ತ್ರಿಶೂರ್‍ನ ವೆನ್ಮನಾಡ್ ಮೂಲದ ಮೊಹಮ್ಮದ್ ಅಲಿ ಹಾಜಿ (87), ತಿರುವನಂತಪುರದ ಹರೀಂದ್ರನ್(67), ತಿರುವನಂತಪುರದ ಭೀಮಾಪುಳ್ಳಿಯ ಶಹನಾತುಮ್ಮ(64), ಪಿಳಪ್ಪುಲಶಾಲದ ನಾರಾಯಣ ಪಿಳ್ಳೆ(89), ಕೋಝಿಕ್ಕೋಡ್ ಪರಂಬಿಲ್ ನ ರವೀಂದ್ರನ್(69), ತೃಶೂರ್ ವಾಂಬೂರಿನ ವಿಲ್ಸನ್(53), ತೃಶೂರಿನ ಚಂದ್ರನ್ ನಾಯರ್(79), ತಿರುವನಂತಪುರ ಪೂಜಾಪುರದ ಸ್ಟೆನ್ ಲಿ((54), ಎರ್ನಾಕುಳಂ ಕುನ್ನತ್ತರಿಯ ಇಸ್ಮಾಯಿಲ್(55), ಪಾಲಕ್ಕಾಡ್ ಅಂಬಲಪ್ಪುರದ ಖಾಲಿದ್(55) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ.  

          ಕೋವಿಡ್ ಸೋಂಕು ಹೆಚ್ಚುತ್ತಿವೆ:

    ಕೇರಳದಲ್ಲಿ ಕೋವಿಡ್ ಬಲಿಪಶುಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಸಂಪರ್ಕ ಪ್ರಕರಣಗಳ ಏರಿಕೆಯೊಂದಿಗೆ, ಬಗೆಹರಿಯದ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಸಾವಿನ ಸಂಖ್ಯೆ ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ ಹೆಚ್ಚುತ್ತಿರುವ ಕಾರಣ ನಿಯಂತ್ರಣ ಕ್ರಮಗಳಿಗೆ ಹಿನ್ನಡೆಯಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಮನೆಯಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮತ್ತು ಕ್ವಾರಂಟೈನ್ ಮಾಡುವ ಜನರ ಸಂಖ್ಯೆಯೂ ಹೆಚ್ಚಿದೆ. ರಾಜ್ಯದಲ್ಲಿ ಹಾಟ್ ಸ್ಪಾಟ್‍ಗಳ ಸಂಖ್ಯೆಯಲ್ಲೂ ಬದಲಾವಣೆ ಮಾಡಲಾಗಿದೆ. ನಿಯಂತ್ರಣಗಳಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ನೀಡಿದಂತೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries