ಉಪ್ಪಳ: ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಪ್ರಮುಖ ಆರೋಪಿಯೆಂದು ದೂರಲಾದ ಬಹುಕೋಟಿ ರೂ.ಗಳ ಜುವೆಲ್ಲರಿ ಹಗರಣ ಸಂಬಂಧ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಗೆ ಮಾರ್ಚ್-ಧರಣಿ ಸತ್ಯಾಗ್ರಹ ನಡೆಯಿತು. ಬಿಜೆಪಿ ಕಾಠರ್ಯಕರ್ತರನ್ನು ತಡೆದ ಪೆÇೀಲೀಸರು ಜಲ ಪಿರಂಗಿ ಪ್ರಯೋಗಿಸಿದ ಘಟನೆ ನಡೆದಿದೆ.
ನೂರಾರು ಕಾರ್ಯಕರ್ತರು ಘೋಷಣನೆಗಳನ್ನು ಕೂಗುತ್ತ ತಾಲೂಕು ಕಚೇರಿಯತ್ತ ಧಾವಿಸುವ ಹಂತದಲ್ಲಿ ಪೆÇೀಲೀಸರು ತಡೆದಿದ್ದು, ರೊಚ್ಚಿಗೆದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಬಳಿಕ ಜಲಪಿರಂಗಿ ಬಳಸಿ ಚದುರಿಸಿದರು. ಹಲವು ಕಾರ್ಯಕರ್ತರು ಗಾಯಗೊಂಡರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಬಿಜೆಪಿ ಉತ್ತರ ವಲಯ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ಸದಾನಂದ ರೈ, ಮುರಳೀಧರ ಯಾದವ್, ಎ.ಕೆ.ಕಯ್ಯಾರ್, ರೂಪವಾಣಿ ಆರ್.ಭಟ್., ಆದರ್ಶ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು. ಮುರಳೀಧರ ಯಾದವ್ ಸ್ವಾಗತಿಸಿದರು.

