HEALTH TIPS

ಕೋವಿಡ್ ಧನಸಹಾಯವನ್ನು ಪಡೆಯದ ವಲಸಿಗರು ತಮ್ಮ ದಾಖಲೆಗಳನ್ನು ಮತ್ತೆ ಸಲ್ಲಿಸಲು ಅವಕಾಶ-ಸರ್ಕಾರ-ಇಲ್ಲಿದೆ ಪೂರ್ಣ ಮಾಹಿತಿ

    

       ತಿರುವನಂತಪುರ: ಕೋವಿಡ್ ಲಾಕ್ ಡೌನ್ ಕಾರಣ ವಿದೇಶದಲ್ಲಿ ವಿವಿಧ ಉದ್ಯೋಗದಲ್ಲಿ ರಾಜ್ಯಕ್ಕೆ ಮರಳಿರುವ ವಲಸಿಗರು ರಾಜ್ಯ ಸರ್ಕಾರ ಒದಗಿಸಿದ 5,000 ರೂ.ಗಳ ಆರ್ಥಿಕ ನೆರವನ್ನು ಈವರೆಗೆ ಪಡೆಯದವರಿಗೆ ಮತ್ತೆ ಅರ್ಜಿ ಸಲ್ಲಿಸಬಹುದು. ಜನವರಿ 1 ರ ನಂತರ ಊರಿಗೆ ಮರಳಿದ ಮತ್ತು ಹಿಂತಿರುಗಲು ಸಾಧ್ಯವಾಗದವರಿಗೆ ಸಹಾಯ ಲಭ್ಯವಾಗಲಿದೆ. 

           www.norkaroots.org  ವೆಬ್‍ಸೈಟ್‍ನಲ್ಲಿರುವ 'ಕೋವಿಡ್ ಸಪೆÇೀರ್ಟ್' ಲಿಂಕ್ ಅನ್ನು ಕ್ಲಿಕ್ ಮಾಡಿ, ತಿದ್ದುಪಡಿ ಆಯ್ಕೆಯನ್ನು ನಮೂದಿಸಿ, ನಿಮ್ಮ ಮೊದಲ ನೋಂದಣಿ ಸಂಖ್ಯೆ ಮತ್ತು ಪಾಸ್‍ಪೆÇೀರ್ಟ್ ಸಂಖ್ಯೆಯನ್ನು ನಮೂದಿಸಿ ಮತ್ತು ಪ್ರಸ್ತುತ ಸ್ಥಿತಿಯನ್ನು ತಿಳಿಯಲು ಮೌಲ್ಯಾಂಕನ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು SMS ಸಂದೇಶವನ್ನು ಸ್ವೀಕರಿಸುವವರು ಕೋವಿಡ್ ಬೆಂಬಲಕ್ಕೆ ಲಾಗ್ ಇನ್ ಮಾಡಬಹುದು ಮತ್ತು ತಿದ್ದುಪಡಿಗಳನ್ನು ಮಾಡಬಹುದು.

       ಎನ್ ಆರ್ ಐ ಖಾತೆ ಸಂಖ್ಯೆಗಳನ್ನು ಹೊಂದಿರುವವರು ಉಳಿತಾಯ ಖಾತೆ ಸಂಖ್ಯೆಯನ್ನು ನಮೂದಿಸಿದ ಬಳಿಕ ಸಂಬಂಧಿತ ದಾಖಲೆಗಳನ್ನು ಮರು ಸಲ್ಲಿಸಬೇಕು. ಸಲ್ಲಿಸಬೇಕಾದ ದಾಖಲೆಗಳು ಎರಡು ಎಂ.ಬಿ.ಗಿಂತ ಕಡಿಮೆ ಇರುವ ಪಿಡಿಎಫ್ / ಜೆಪಿಇಜಿ ಸ್ವರೂಪದಲ್ಲಿರಬೇಕು. ಡಾಕ್ಯುಮೆಂಟ್‍ಗಳನ್ನು ಸಲ್ಲಿಸಿದ ನಂತರ, ಸೇವ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಡಾಕ್ಯುಮೆಂಟ್‍ಗಳನ್ನು ಯಶಸ್ವಿಯಾಗಿ ಅಪ್‍ಲೋಡ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇದರ ಅಂತಿಮ ಗಡುವು ನವೆಂಬರ್ 7 ರ ವರೆಗೂ ಇರಲಿದೆ.

         ವಿವರವಾದ ಮಾಹಿತಿ ನಾರ್ಕಾ-ರೂಟ್ಸ್ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. ಈ ಕುರಿತು ಯಾವುದೇ ಪ್ರಶ್ನೆಗಳಿಗೆ ನೀವು ಸೋಮವಾರ ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು.

          ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟು ಮತ್ತು ಆಲಪ್ಪುಳ ಜಿಲ್ಲೆಗಳ ಜನರು 7736840358, 9747183831, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ 9188268904, 9188268904 ಮತ್ತು 988266904, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯವರು 9400067470, 9400067471, 9400067472, 9400067473 ಎಂಬ ಸಂಪರ್ಕ ಸಂಖ್ಯೆಗೆ ಕರೆಮಾಡಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries