HEALTH TIPS

ಕೋಳ್ಯೂರು ಯಕ್ಷಗಾನ ನವಾಹದ ಶತಮಾನೋತ್ಸವ

     ಮಂಜೇಶ್ವರ: ಶ್ರೀ ಮಹಾಗಣಪತಿ ಶಂಕರನಾರಾಯಣ ಯಕ್ಷ ಕಲಾ ಸಂಘ ಕೋಳ್ಯೂರು ಇದರ 10 ನೇ ವರ್ಷದ ಯಕ್ಷಗಾನ ನವಾಹದ ಕಾರ್ಯಕ್ರಮವು ಕೋವಿಡ್  ನಿಯಮಕ್ಕನುಸಾರವಾಗಿ ಏಕ ದಿನದ ಯಕ್ಷಗಾನ ತಾಳಮದ್ದಳೆಯು ಇತ್ತೀಚೆಗೆ ಜರಗಿತು. 

        ಪ್ರತಿಷ್ಠಾನದ ಅಧ್ಯಕ್ಷರೂ, ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರೂ ಆದ ರವಿಶಂಕರ ಹೊಳ್ಳ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆಯಿತ್ತು ಉದ್ಘಾಟಿಸಿದರು. 

        ತಾಳಮದ್ದಳೆಯ ಭಾಗವತರಾಗಿ ಜಿ.ಕೆ.ನಾವಡ ಬಾಯಾರು, ಚೆಂಡೆ ಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು, ರಾಜ ಕುಮಾರ ಕೋಳ್ಯೂರು, ಪೃಥ್ವಿಚಂದ್ರ ಪೆರ್ವೋಡಿ, ಭಾರ್ಗವ ಕೃಷ್ಣ ಬಲಿಪಗುಳಿ ಸಹಕರಿಸಿದರು. ಅರ್ಥಧಾರಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ, ವಿಠಲ ಭಟ್ ಮೊಗಸಾಲೆ, ಶಂಕರಾಚಾರ್ಯ ಕೋಳ್ಯೂರು, ಚಂದ್ರ ಕುಮಾರ ಬಲಿಪಗುಳಿ ಮತ್ತು ಪ್ರಭಾಕರ ಶೆಟ್ಟಿ ಮಂಜಯಹಿತ್ಲು ಭಾಗವಹಿಸಿದ್ದರು. ಕರ್ಣಾರ್ಜುನ ಕಾಳಗ ಪ್ರಸಂಗದ ಕೂಟ ನಡೆಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries