ತಿರುವನಂತಪುರ: ಕಿಫ್ಬಿ ಮೂಲಕ ಯೋಜನೆಗಳ ಅನುಷ್ಠಾನವು ವಿಕೃತ ಮನಸ್ಸನ್ನು ಕದಡುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಿಬ್ಬಿಯನ್ನು ಬುಡಮೇಲುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.
ವಿಶೇಷವೆಂದರೆ ಸಂಘ ಪರಿವಾರದ ನಾಯಕ ಕಿಬ್ಬಿ ವಿರುದ್ಧ ಪ್ರಕರಣ ದಾಖಲಿಸುತ್ತಾನೆ. ಇದಕ್ಕೆ ಕಾಂಗ್ರೆಸ್ಸ್ ಜೊತೆಯಾಗುತ್ತದೆ. ಇದು ಉತ್ತಮ ಐಕ್ಯತೆ ಎಂದು ಮುಖ್ಯಮಂತ್ರಿ ಅಪಹಾಸ್ಯ ಮಾಡಿದರು. ಅಭಿವೃದ್ಧಿ ಚಟುವಟಿಕೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಎಂದು ಪ್ರತಿಪಕ್ಷಗಳು ಹೇಳುತ್ತಿದೆಯೇ? ಅಭಿವೃದ್ಧಿ ವಿರೋಧಿ ಕಾರ್ಯಕರ್ತರು ಮಾತ್ರವಲ್ಲದೆ ರಾಜ್ಯದ ಸುಧಾರಣೆಯ ಬಗ್ಗೆ ಆತಂಕದಲ್ಲಿರುವವರು ಕಿಬ್ಬಿ ವಿರುದ್ಧ ನಿಲುವು ತೆಗೆದುಕೊಳ್ಳುತ್ತಿದ್ದಾರೆ. ಕಿಬ್ಬಿ ಯೋಜನೆಗಳನ್ನು ತಮ್ಮ ಕ್ಷೇತ್ರದಲ್ಲಿ ಜಾರಿಗೊಳಿಸಬಾರದು ಎಂದು ಪ್ರತಿಪಕ್ಷದ ಶಾಸಕರು ಹೇಳುತ್ತಾರೆಯೇ ಎಂದು ಅವರು ಕೇಳಿದರು.
ರಾಜ್ಯದ ಅಭಿವೃದ್ಧಿಯೇ ಸಮಸ್ಯೆಯಾದಂತಿದೆ. ಅಗತ್ಯಗಳನ್ನು ಆಧರಿಸಿ ಯೋಜನೆಗಳನ್ನು ಅನುಮೋದಿಸಲಾಗಿದೆ. ಅದರಲ್ಲಿ ಯಾವುದೇ ದೋಷ ಕಂಡುಬಂದಿಲ್ಲವಾದ್ದರಿಂದ ಹಿಂದಿನ ದೂರುಗಳನ್ನು ಹಿಂಪಡೆಯಲಾಯಿತು. ರಾಜ್ಯಕ್ಕಾಗಿ ಕೆಲಸಗಳನ್ನು ಮಾಡುವಾಗ ಸರ್ಕಾರದ ಪ್ರತಿಷ್ಠೆ ಹೆಚ್ಚಿದರೆ ಅಭಿವೃದ್ದಿ ಚಟುವಟಕೆಗಳಿಗೆ ಆಸ್ಪದ ನೀಡಲಾಗುವುದಿಲ್ಲ ಎಂದು ಹೇಳುವುದು ಸರಿಯೇ ಎಂದು ಸಿಎಂ ಕೇಳಿದರು.
50,000 ಕೋಟಿ ರೂ.ಗಳ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ. ಆದರೆ 55,000 ಕೋಟಿ ರೂ.ಗಳ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಏತನ್ಮಧ್ಯೆ, ಕಿಫ್ಬಿಯನ್ನು ಧೂಳೀಪಟಗೈಯ್ಯಲು ಪ್ರಯತ್ನಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಕಿಪ್ಭಿ ನಿರ್ಮಿತ ಹಲವು ಯೋಜನೆಗಳು ಉತ್ತಮವಾಗಿಲ್ಲವೇ ಎಂದು ಸಿಎಂ ಕೇಳಿದರು.


