HEALTH TIPS

ರಾಜ್ಯದಲ್ಲೂ ಲಸಿಕೆ ವಿತರಣೆ ಆರಂಭ


       ತಿರುವನಂತಪುರ: ಕರೋನಾ ವಿರುದ್ದದ ನಿರ್ಣಾಯಕ ಹೋರಾಟದ ಬಾಗಿಲು ತೆರೆದುಕೊಂಡಿದ್ದು,  ರಾಜ್ಯದಲ್ಲೂ ಇಂದು ಲಸಿಕೆ ವಿತರಣೆ ಪ್ರಾರಂಭವಾಗಿದೆ. ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ರಮದೇವಿ ಅವರು ಮೊದಲ ಕರೋನಾ ಲಸಿಕೆ ಪ್ರಮಾಣವನ್ನು ಪಡೆದರು. ಇಂದು ರಾಜ್ಯದಲ್ಲಿ 13,300 ಜನರಿಗೆ ಲಸಿಕೆ ಹಾಕಲಾಗಿದೆ.
      ಲಸಿಕೆ ವಿತರಣೆಗಾಗಿ ರಾಜ್ಯಾದ್ಯಂತ 133 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎರ್ನಾಕುಳಂನಲ್ಲಿ 12 ಕೇಂದ್ರಗಳು, ತಿರುವನಂತಪುರ ಮತ್ತು ಕೋಝಿಕೋಡ್ ಜಿಲ್ಲೆಗಳಲ್ಲಿ 11 ಕೇಂದ್ರಗಳು ಮತ್ತು ಇತರ ಜಿಲ್ಲೆಗಳಲ್ಲಿ 9 ಕೇಂದ್ರಗಳು ಇವೆ. ಇಂದು ಬೆಳಿಗ್ಗೆ 10.30 ಕ್ಕೆ ಲಸಿಕೆ ವಿತರಣೆ ಪ್ರಾರಂಭವಾಯಿತು. ಲಸಿಕೆ ಪಡೆದ ನಂತರವೂ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
     ರಾಜ್ಯದಲ್ಲಿ ಪ್ರತಿ ವ್ಯಕ್ತಿಗೆ 0.5 ಎಂಎಲ್ ಕೋವಿಶೀಲ್ಡ್  ಲಸಿಕೆ ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ.ಮೊದಲ ಡೋಸ್ ಪಡೆದ ಬಳಿಕ 28 ದಿನಗಳ ನಂತರ ಮುಂದಿನ ಡೋಸ್ ನೀಡಲಾಗುತ್ತದೆ. ಲಸಿಕೆ ಪಡೆದ ನಂತರ ಅವರನ್ನು 30 ನಿಮಿಷಗಳ ಕಾಲ ನಿರೀಕ್ಷಣೆಗೆ ಒಳಪಡಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಗಾ ಇಡುವುದಕ್ಕೆ ಈ ಕ್ರಮ ಅಳವಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries