HEALTH TIPS

ರಾಜ್ಯದಲ್ಲಿಂದು 2884 ಮಂದಿಗೆ ಸೋಂಕು ಪತ್ತೆ- ಕಾಸರಗೋಡು- 44 ಜನರಿಗೆ ಕೋವಿಡ್ ದೃಢ-ರಾಜ್ಯಾದ್ಯಂತ ಕೋವಿಡ್ ಅಧಿಕೃತ ಮರಣ 4 ಸಾವಿರದ ಸನಿಹ!

        ತಿರುವನಂತಪುರ: ರಾಜ್ಯದಲ್ಲಿ ಇಂದು 2884 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 560, ಎರ್ನಾಕುಳಂ 393, ಕೋಝಿಕೋಡ್ 292, ಕೊಟ್ಟಾಯಂ 289, ಆಲಪ್ಪುಳ 254, ತಿರುವನಂತಪುರ 248, ಕೊಲ್ಲಂ 192, ತ್ರಿಶೂರ್ 173, ಕಣ್ಣೂರು 135, ಪತ್ತನಂತಿಟ್ಟು 107, ಪಾಲಕ್ಕಾಡ್ 83, ವಯನಾಡ್ 70, ಇಡುಕ್ಕಿ 44, ಕಾಸರಗೋಡು 44 ಎಂಬಂತೆ ಸೋಂಕು ಬಾಧಿಸಿದೆ.
         ಕಳೆದ 24 ಗಂಟೆಗಳಲ್ಲಿ     ಯು .ಕೆ ಯಿಂದ ಆಗಮಿಸಿದ 2 ಜನರಿಗೆ ಸೋಂಕು ದೃಢಪಡಿಸಲಾಗಿದೆ.  ಯುಕೆ ಯಿಂದ ಆಗಮಿಸಿದ 84 ಜನರಿಗೆ ಈಗಾಗಲೇ ಸೋಂಕು ಖಚಿತಪಡಿಸಲಾಗಿದೆ. ಈ ಪೈಕಿ 70 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.
       ಕಳೆದ 24 ಗಂಟೆಗಳಲ್ಲಿ 39,463 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ. 7.31 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,06,27,542 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
        ಕಳೆದ 24 ಗಂಟೆಗಳಲ್ಲಿ 13 ಮಂದಿ ಕೋವಿಡ್  ಕಾರಣ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3998 ಕ್ಕೆ ಏರಿಕೆಯಾಗಿದೆ.
       ಇಂದು,ಸೋಂಕು ಪತ್ತೆಯಾದವರಲ್ಲಿ 44 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2651 ಮಂದಿ ಜನರಿಗೆ ಸೋಂಕು ತಗಲಿದೆ. 165 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 543, ಎರ್ನಾಕುಲಂ 378, ಕೋಝಿಕೋಡ್ 281, ಕೊಟ್ಟಾಯಂ 279, ಆಲಪ್ಪುಳ 250, ತಿರುವನಂತಪುರ 176, ಕೊಲ್ಲಂ 190, ತ್ರಿಶೂರ್ 168, ಕಣ್ಣೂರು 102,ಪತ್ತನಂತಿಟ್ಟು 98, ಪಾಲಕ್ಕಾಡ್ 39, ವಯನಾಡ್ 68, ಇಡುಕ್ಕಿ 39 ಮತ್ತು ಕಾಸರಗೋಡು  40 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ.


         ಇಂದು ಇಪ್ಪತ್ನಾಲ್ಕು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ.  ತಿರುವನಂತಪುರ 6, ಕೋಝಿಕೋಡ್ 5, ಕಣ್ಣೂರು 4, ಎರ್ನಾಕುಳಂ 3, ಮಲಪ್ಪುರಂ 2, ಪತ್ತನಂತಿಟ್ಟು, ತ್ರಿಶೂರ್, ಪಾಲಕ್ಕಾಡ್ ಮತ್ತು ವಯನಾಡ್ 1  ಎಂಬಂತೆ ಸೋಂಕು ದೃಢಪಟ್ಟಿದೆ. 
          ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5073 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 302, ಕೊಲ್ಲಂ 801, ಪತ್ತನಂತಿಟ್ಟು 482, ಆಲಪ್ಪುಳ 353, ಕೊಟ್ಟಾಯಂ 489, ಇಡುಕ್ಕಿ 104, ಎರ್ನಾಕುಳಂ 502, ತ್ರಿಶೂರ್ 477, ಪಾಲಕ್ಕಾಡ್ 174, ಮಲಪ್ಪುರಂ 649, ಕೊಝಿಕೋಡ್ 336, ವಯನಾಡ್ 104, ಕಣ್ಣೂರು 231, ಕಾಸರಗೋಡು 69 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 61,281 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 9,41,471 ಜನರನ್ನು ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.
        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,50,724 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,40,859 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 9,865 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 962 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್‌ಸ್ಪಾಟ್ ಇಲ್ಲ. 32 ಪ್ರದೇಶಗಳನ್ನು ಹಾಟ್‌ಸ್ಪಾಟ್‌ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 428 ಹಾಟ್‌ಸ್ಪಾಟ್‌ಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries