HEALTH TIPS

ರಾಜ್ಯದಲ್ಲಿ ಇಂದು 4070 ಮಂದಿಗೆ ಕೊರೊನಾ-3704 ಮಂದಿಗೆ ಸಂಪರ್ಕದಿಂದ ಸೋಂಕು-ಕಾಸರಗೋಡು:100 ಮಂದಿಗೆ ಕೋವಿಡ್

                    

            ತಿರುವನಂತಪುರ: ರಾಜ್ಯದಲ್ಲಿ ಇಂದು 4070 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಕೋಝಿಕೋಡ್ 552, ಎರ್ನಾಕುಲಂ 514, ಕೊಟ್ಟಾಯಂ 440, ಪತ್ತನಂತಿಟ್ಟು 391, ತ್ರಿಶೂರ್ 361, ಮಲಪ್ಪುರಂ 346, ಕೊಲ್ಲಂ 334, ಆಲಪ್ಪುಳ 290, ತಿರುವನಂತಪುರ 266, ಕಣ್ಣೂರು 167, ಪಾಲಕ್ಕಾಡ್ 129, ಕಾಸರಗೋಡು 100, ಇಡುಕ್ಕಿ 97, ವಯನಾಡ್ 83 ಎಂಬಂತೆ ಸೋಂಕು ಬಾಧಿಸಿದೆ. 


       ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಬಂದ ಯಾರಲ್ಲೂ ಸೋಂಕು ಕಂಡುಬಂದಿಲ್ಲ. ಆದರೆ ಇತ್ತೀಚೆಗೆ ಯುಕೆಯಿಂದ ಆಗಮಿಸಿದ್ದ  86 ಮಂದಿ ಜನರಲ್ಲಿ  ಖಚಿತಪಡಿಸಲಾಗಿತ್ತು. ಈ ಪೈಕಿ 72 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ 57,241 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 7.11ಶೇ ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,10,30,136 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

        ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಕೋವಿಡ್ ಬಾಧಿಸಿ 15 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4,089 ಕ್ಕೆ ಏರಿಕೆಯಾಗಿದೆ. 

        ಇಂದು, ಸೋಂಕು ಪತ್ತೆಯಾದವರಲ್ಲಿ 68 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 3704 ಮಂದಿ ಜನರಿಗೆ ಸೋಂಕು ತಗಲಿತು. 269 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 540, ಎರ್ನಾಕುಳಂ 480, ಕೊಟ್ಟಾಯಂ 405, ಪತ್ತನಂತಿಟ್ಟು 351, ತ್ರಿಶೂರ್ 355, ಮಲಪ್ಪುರಂ 337, ಕೊಲ್ಲಂ 330, ಆಲಪ್ಪುಳ 288, ತಿರುವನಂತಪುರ 171, ಕಣ್ಣೂರು 134, ಪಾಲಕ್ಕಾಡ್ 63, ಕಾಸರಗೋಡು 83, ಇಡುಕ್ಕಿ 90, ವಯನಾಡ್ 77 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ.

       ಇಂದು 29 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕೊಟ್ಟಾಯಂ 9, ಎರ್ನಾಕುಳಂ, ಕಣ್ಣೂರು ತಲಾ 5, ಕೊಲ್ಲಂ 3, ತ್ರಿಶೂರ್, ಕೋಝಿಕೋಡ್, ಕಾಸರಗೋಡು 2 ಮತ್ತು ವಯನಾಡ್ 1 ಎಂಬಂತೆ ಸೋಂಕು ದೃಢಪಟ್ಟಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4345 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 370, ಕೊಲ್ಲಂ 254, ಪತ್ತನಂತಿಟ್ಟು 299, ಆಲಪ್ಪುಳ 375, ಕೊಟ್ಟಾಯಂ 212, ಇಡುಕಿ 153, ಎರ್ನಾಕುಳಂ 500, ತ್ರಿಶೂರ್ 450, ಪಾಲಕ್ಕಾಡ್ 183, ಮಲಪ್ಪುರಂ 535, ಕೊಝಿಕೋಡ್ 652, ವಯನಾಡ್ 122, ಕಣ್ಣೂರು 149, ಕಾಸರಗೋಡು 91 ಎಂಬಂತೆ ಇಂದು ನೆಗೆಟಿವ್ ಆಗಿದೆ. ಇದರೊಂದಿಗೆ 58,313 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 9,71,975 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,46,811 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,37,660 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 9,151 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 966 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 8 ಹೊಸ ಹಾಟ್‍ಸ್ಪಾಟ್‍ಗಳಿವೆ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 372 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries