HEALTH TIPS

ರಾಜ್ಯದಲ್ಲಿ ಇಂದು 4,937 ಮಂದಿಗೆ ಕೋವಿಡ್-ಕಾಸರಗೋಡಲ್ಲಿ 126 ಮಂದಿಗೆ ಸೋಂಕು ದೃಢ

             

             ತಿರುವನಂತಪುರ: ಕೇರಳದಲ್ಲಿ ಇಂದು 4,937 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಇಂದು ಒಟ್ಟು 18 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. 

                   ಜಿಲ್ಲಾವಾರು ಅಂಕಿಅಂಶಗಳು:

         ಇಂದು ಕೋವಿಡ್ ಎರ್ನಾಕುಳಂ 643, ಕೊಲ್ಲಂ 547, ಪತ್ತನಂತಿಟ್ಟು 524, ತ್ರಿಶೂರ್ 503, ಕೊಟ್ಟಾಯಂ 471, ಕೋಝಿಕೋಡ್ 424, ಆಲಪ್ಪುಳ 381, ತಿರುವನಂತಪುರ 373, ಮಲಪ್ಪುರಂ 345, ಪಾಲಕ್ಕಾಡ್ 217, ಕಣ್ಣೂರು 182,ವಯನಾಡ್ 135, ಕಾಸರಗೋಡು 126, ಇಡುಕ್ಕಿ 66 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

              ಪರೀಕ್ಷಿಸಿದ ಮಾದರಿಗಳು:

       ಕಳೆದ 24 ಗಂಟೆಗಳಲ್ಲಿ 74,352 ಮಾದರಿಗಳನ್ನು ಪರೀಕ್ಷಿಸಲಾಯಿತು. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,07,01,894 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

                 ಚೇತರಿಸಿಕೊಂಡವರು:

      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5439 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 368, ಕೊಲ್ಲಂ 331, ಪತ್ತನಂತಿಟ್ಟು 589, ಆಲಪ್ಪುಳ 214, ಕೊಟ್ಟಾಯಂ 699, ಇಡುಕಿ 113, ಎರ್ನಾಕುಳಂ 486, ತ್ರಿಶೂರ್ 494, ಪಾಲಕ್ಕಾಡ್ 185, ಮಲಪ್ಪುರಂ 570, ಕೋಝಿಕೋಡ್ 866, ವಯನಾಡ್ 150, ಕಣ್ಣೂರು 267, ಕಾಸರಗೋಡು 107 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ, 60,761 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 9,46,910 ಮಂದಿ ಈವರೆಗೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ. 29 ಆರೋಗ್ಯ ಕಾರ್ಯಕರ್ತರಲ್ಲಿ ಇಂದು ಸೋಂಕು ದೃಢಪಡಿಸಲಾಗಿದೆ. 

           ಸಂಪರ್ಕದಿಂದ ಸೋಂಕು ಬಾಧಿತರು:

     ಇಂದು, ಕೋವಿಡ್ ದೃಢಪಡಿಸಿದ 90 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4478 ಮಂದಿ ಜನರಿಗೆ ಸೋಂಕು ತಗಲಿತು. 340 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 626, ಕೊಲ್ಲಂ 540, ಪತ್ತನಂತಿಟ್ಟು 491, ತ್ರಿಶೂರ್ 491, ಕೊಟ್ಟಾಯಂ 431, ಕೋಝಿಕೋಡ್ 407, ಆಲಪ್ಪುಳ 361, ತಿರುವನಂತಪುರ 250, ಮಲಪ್ಪುರಂ 322, ಪಾಲಕ್ಕಾಡ್ 118, ಕಣ್ಣೂರು 143, ವಯನಾಡ್ 131, ಕಾಸರಗೋಡು 109, ಇಡುಕ್ಕಿ 58 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.

             ನಿರೀಕ್ಷಣೆಯಲ್ಲಿರುವವರು:

     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,53,595 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,44,085 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 9,510 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 1,071 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು, ಎರಡು ಪ್ರದೇಶಗಳು ಹಾಟ್‍ಸ್ಪಾಟ್ ಪಟ್ಟಿಯಲ್ಲಿವೆ. ಒಟ್ಟು 430 ಹಾಟ್‍ಸ್ಪಾಟ್ ಗಳಿವೆ. 

                  ಸೋಮವಾರದ ವರದಿ: 

     ನಿನ್ನೆ ರಾಜ್ಯದಲ್ಲಿ 2884 ಮಂದಿ ಜನರಿಗೆ ಕೋವಿಡ್  ಖಚಿತವಾಗಿತ್ತು. ಮಲಪ್ಪುರಂ 560, ಎರ್ನಾಕುಳಂ 393, ಕೋಝಿಕ್ಕೋಡ್ 292, ಕೊಟ್ಟಾಯಂ 289, ಆಲಪ್ಪುಳ 254, ತಿರುವನಂತಪುರ 248, ಕೊಲ್ಲಂ 192, ತ್ರಿಶೂರ್ 173, ಕಣ್ಣೂರು 135, ಪತ್ತನಂತಿಟ್ಟು 107, ಪಾಲಕ್ಕಾಡ್ 83, ವಯನಾಡ್ 70, ಇಡುಕ್ಕಿ 44, ಕಾಸರಗೋಡು 44 ಎಂಬತೆ ಸೋಂಕು ಪಾಸಿಟಿವ್ ಆಗಿತ್ತು. ಯುಕೆಯಿಂದ ಆಗಮಿಸಿದ ಇಬ್ಬರಲ್ಲಿ ನಿನ್ನೆ ಸೋಂಕು ಪತ್ತೆಯಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries