HEALTH TIPS

ಶಬರಿಮಲೆಗೆ ಮಹಿಳಾ ಪ್ರವೇಶ ಘಟನೆ- ಹಲವು ವಿಷಯಗಳನ್ನು ಬಹಿರಂಗಪಡಿಸಿದ ಕೃಷ್ಣಕುಮಾರ್!

       ಪತ್ತನಂತಿಟ್ಟು: ಅಯ್ಯಪ್ಪ ಧರ್ಮ ಸಂರಕ್ಷಣ ಸಮಿತಿ ಅಧ್ಯಕ್ಷ ಎಸ್.ಕೃಷ್ಣಕುಮಾರ್ ಅವರು ಶಬರಿಮಲೆಗೆ ಮಹಿಳಾ ಪ್ರವೇಶದ ಕುರಿತು ಮಹತ್ವದ ವಿವರವೊಂದನ್ನು ಇಂದು  ಬಹಿರಂಗಪಡಿಸಿದ್ದಾರೆ. 
       ಆರ್‌ಎಸ್‌ಎಸ್ ಶಬರಿಮಲೆಯ ನಂಬಿಕೆಗೆ ಸಂಬಂಧಿಸಿ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತು. ಪ್ರತಿಶತಃ 50  ಆರ್‌ಎಸ್‌ಎಸ್ ಮುಖಂಡರು ಮಹಿಳೆಯರು ಸಬರಿಮಲೆ  ದರ್ಶಿಸಬಹುದೆಂಬ  ಅಭಿಪ್ರಾಯ ಹೊಂದಿದ್ದರು. ಆದರೆ ಪಂದಳಂನಲ್ಲಿ ನಡೆದ ನಾಮಜಪ ಮೆರವಣಿಗೆಗೆ ದೊರೆತ ಬೆಂಬಲವನ್ನು ಗಮನಿಸಿದ ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಂಡರು ಎಂದು  ಎಂದು ಎಸ್.ಕೃಷ್ಣಕುಮಾರ್  ಅವರು ಬಹಿರಂಗಪಡಿಸಿದರು.
       ಮಹಿಳೆಯರು ಶಬರಿಮಲೆಗೆ ಪ್ರವೇಶಿಸಬೇಕು ಎಂಬುದು ಬಿಜೆಪಿಯ ಹಳೆಯ ನಿಲುವಾಗಿತ್ತು. ತೀರ್ಪಿನ ಒಂದು ವರ್ಷದ ಮೊದಲು ಕೆ ಸುರೇಂದ್ರನ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದರು ಎಂದು ಕೃಷ್ಣಕುಮಾರ್ ಹೇಳಿದ್ದಾರೆ.
     ನಾಮಜಪ ಮೆರವಣಿಗೆಯ ನಂತರ ಹಿಂಸಾಚಾರದ ಹಿಂದೆ ಪಿತೂರಿ ಇದೆ ಎಂದು ಮಾಜಿ ಬಿಜೆಪಿ ಪತ್ತನಂತಿಟ್ಟು ಜಿಲ್ಲಾ ಸಮಿತಿ ಸದಸ್ಯ ಕೃಷ್ಣಕುಮಾರ್ ಹೇಳಿದ್ದಾರೆ.
      ಬಿಜೆಪಿಯನ್ನು ತೊರೆದು ನಿನ್ನೆಯಷ್ಟೇ ಕೃಷ್ಣಕುಮಾರ್ ಸಿಪಿಎಂ ಸೇರಿದ್ದರು. ಪಕ್ಷ ಬಿಟ್ಟೊಡನೆ ಹಲವು ವಿಷಯಗಳನ್ನು ಅವರು ಬಹಿರಂಗಪಡಿಸುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries