HEALTH TIPS

ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಜೂನ್‍ನಲ್ಲಿ ಪೂರ್ಣ: ಲಾಭದ ನಿರೀಕ್ಷೆಯಲ್ಲಿ ರೈಲ್ವೆ ಇಲಾಖೆ..!

   

       ಮಂಜೇಶ್ವರ: ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಜೂನ್‍ನಲ್ಲಿ ಪೂರ್ಣಗೊಳ್ಳಲಿದೆ. ಕೊಂಕಣ ರೈಲು ಮಾರ್ಗ ಪೂರ್ಣವಾಗುವುರೊಂದಿಗೆ ಕೇರಳದಿಂದ, ದಕ್ಷಿಣ ಕನ್ನಡ-ಉತ್ತರ ಕನ್ನಡ ಜಿಲ್ಲೆಗಳಿಂದ ಉತ್ತರ ಭಾರತ ರಾಜ್ಯಗಳಿಗಿರುವ ರೈಲುಗಳಿಗೆ ಡೀಸೆಲ್ ಎಂಜಿನ್‍ಗಳನ್ನು ಸಂಪೂರ್ಣವಾಗಿ ಹೊರತುಪಡಿಸಿ ಸರ್ವಿಸ್ ನಡೆಸಲು ಸಾಧ್ಯವಿದೆ. ಪ್ರಸ್ತುತ ಕೊಂಕಣ ಮೂಲಕ ಕೇರಳದ ಹೊರಗೆ ಸರ್ವಿಸ್ ನಡೆಸುವ ರೈಲುಗಳಿಗೆ ಶೋರ್ನೂರ್ ಮೊದಲಾದ ಕಡೆಗಳಿಂದ ವಿದ್ಯುತ್ ಎಂಜಿನ್ ಬದಲಿಸಿ ಡೀಸೆಲ್ ಎಂಜಿನ್ ಬಳಸಿ ಸರ್ವಿಸ್ ನಡೆಸಲಾಗುತ್ತಿದೆ.


       ಮಂಗಳೂರುವರೆಗಿನ ರೈಲುಗಳು ವಿದ್ಯುತ್ ಎಂಜಿನ್ ಬಳಸಿ ಸರ್ವಿಸ್ ನಡೆಸುತ್ತವೆ. ಕೊಂಕಣ ಮೂಲಕ ಓಡುವ ರೈಲುಗಳು ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಪ್ರವೇಶಿಸದೆ ಮೂರು ಕಿ.ಮೀ.ನಷ್ಟು ಮುಂದಕ್ಕೆ ಕೊಂಕಣ ರೈಲು ಮಾರ್ಗಕ್ಕೆ ಪ್ರವೇಶಿಸಬೇಕಿದೆ. ಇದರಿಂದಾಗಿ ಇವುಗಳಲ್ಲಿ ಡೀಸೆಲ್ ಎಂಜಿನ್‍ನ್ನು ಶೋರ್ನೂರಿನಿಂದ ಅಳವಡಿಸಬೇಕಾಗಿದೆ. ಕೊಂಕಣ ರೈಲ್ವೆ ನಿಗಮ 1,000 ಕೋಟಿ ರೂ. ವಿನಿಯೋಗಿಸಿ 400 ಕಿ.ಮೀ. ವಿದ್ಯುದೀಕರಣ ನಡೆಸುತ್ತಿದೆ.

        ದಕ್ಷಿಣ ಕನ್ನಡದ ತೋಕೂರಿನಿಂದ ಬಿಜೂರ್ ವರೆಗಿನ ವಿದ್ಯುದೀಕರಣ 2019ರಲ್ಲಿ ಪೂರ್ಣವಾಗಿತ್ತು. ಮುಂದಿನ ತಿಂಗಳಾಂತ್ಯದಲ್ಲಿ ಕಾರವಾರದವರೆಗೆ ವಿದ್ಯುದೀಕರಣ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಇದೆ.

       ರೈಲುಗಳಿಗೆ 300 ಕಿ.ಮೀ.ನಷ್ಟು ಓಡಲು 1,500 ಲೀಟರ್ ಡೀಸೆಲ್ ಬೇಕು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಗೂಡ್ಸ್ ರೈಲುಗಳಿಗೆ ಇದಕ್ಕಿಂತ ಹೆಚ್ಚು ಡೀಸೆಲ್ ಬೇಕಾಗುತ್ತದೆ. ವಿದ್ಯುದೀಕರಣ ಪೂರ್ಣವಾಗುವುದರೊಂದಿಗೆ ಪ್ರತಿ ವರ್ಷ ಡೀಸೆಲ್ ರೂಪದಲ್ಲಿ ಕೋಟ್ಯಂತರ ರೂ. ಲಾಭ ಪಡೆಯಬಹುದಾಗಿದೆ. ಡೀಸೆಲ್ ತುಂಬಿಸಲು ಕಾದು ನಿಲ್ಲುವ ಸಮಯ ಉಳಿಯಲಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries