ಕುಂಬಳೆ: ಕಳೆದ 48 ವರ್ಷಗಳಿಂದ ಯಕ್ಷಗಾನ ಕಲಾಸೇವೆಯಲ್ಲಿ ನಿರತವಾಗಿರುವ ನಾರಾಯಣಮಂಗಲದ ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘ ಇದರ ವಾರ್ಷಿಕ ಮಹಾಸಭೆ ಕಂಬಾರು ಕೇಶವ ಭಟ್ ಅವರ ನಿವಾಸದಲ್ಲಿ ಭಾನುವಾರ ಜರಗಿತು.
ಸಭೆಯಲ್ಲಿ ಯಕ್ಷ ದಿಗ್ಗಜ ದಿ. ಡಾ.ಶ್ರೀಧರ ಭಂಡಾರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇತರ ಕಾರ್ಯಕಲಾಪಗಳ ಬಳಿಕ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಉಪಾಧ್ಯಕ್ಷರಾಗಿ ಸದಾಶಿವ ಗಟ್ಟಿ ನಾಯ್ಕಾಪು, ಕಾರ್ಯದರ್ಶಿಯಾಗಿ ಕಂಬಾರು ಕೇಶವ ಭಟ್, ಜತೆ ಕಾರ್ಯದರ್ಶಿಯಾಗಿ ಉದಯಶಂಕರ ಭಟ್ ಮಜಲು, ಕೋಶಾಧಿಕಾರಿಯಾಗಿ ಗುರುಮೂರ್ತಿ ಎಂ, ಲೆಕ್ಕ ಪರಿಶೋಧಕರಾಗಿ ಪ್ರದೀಪ್ ಕುಮಾರ್ ಉಚ್ಚಿಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುರಳೀಧರ ಯಾದವ್ ನಾಯ್ಕಾಪು, ಸದಾಶಿವ ಮುಳಿಯಡ್ಕ, ಕೃಷ್ಣಮೂರ್ತಿ ಪಾಡಿ, ವಸಂತ ಕುಮಾರ ದೊಡ್ಡಮಾಣಿ ಆಯ್ಕೆಯಾದರು.
ಸಭೆಯ ಬಳಿಕ ಸಂಘದ ಸದಸ್ಯರಿಂದ ವಾಲಿಮೋಕ್ಷ ಪ್ರಸಂಗದ ತಾಳಮದ್ದಳೆ ಜರಗಿತು.