HEALTH TIPS

BREAKING-ಎಸ್.ಎಸ್.ಎಲ್.ಸಿ, ಪ್ಲಸ್ ಟು ಪರೀಕ್ಷೆಗಳ ಮುಂದೂಡಿಕೆ-ವಿಧಾನಸಭೆ ಚುನಾವಣೆಯ ಬಳಿಕ ಏಪ್ರಿಲ್ 8 ರಿಂದ ಪರೀಕ್ಷೆ

       ತಿರುವನಂತಪುರ: ಎಸ್.ಎಸ್.ಎಲ್.ಸಿ ಮತ್ತು ಪ್ಲಸ್ ಟು ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿಧಾನಸಭೆ ಚುನಾವಣೆಯ ಬಳಿಕ ಏಪ್ರಿಲ್ 8 ರಿಂದ ಪರೀಕ್ಷೆಗಳು ನಡೆಯಲಿವೆ. ಕೇಂದ್ರ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ. ನವೀಕರಿಸಿದ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪರೀಕ್ಷೆಗಳನ್ನು ಪ್ರಾರಂಭಿಸಲು ಕೇವಲ ಆರು ದಿನಗಳು ಬಾಕಿ ಇರುವಾಗ ಮುಂದೂಡಲಾಗಿದೆ.

       ಎಸ್.ಎಸ್.ಎಲ್.ಸಿ. ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು ಮುಂದೂಡಬೇಕೆ ಎಂಬ ಬಗ್ಗೆ ತಕ್ಷಣದ ನಿರ್ಧಾರವನ್ನು ಕೋರಿ ಮುಖ್ಯ ಚುನಾವಣಾಧಿಕಾರಿ (ಸಿಇಒ) ಎರಡನೇ ಬಾರಿಗೆ ಕೇಂದ್ರ ಚುನಾವಣಾ ಆಯೋಗಕ್ಕೆ (ಸಿಇಸಿ) ಪತ್ರ ಬರೆದಿದ್ದರು.

       ಕೇಂದ್ರ ಚುನಾವಣಾ ಆಯೋಗವು (ಸಿಇಸಿ) ಸರ್ಕಾರದ ಪತ್ರವನ್ನು ಅನುಮೋದಿಸಿ ಚುನಾವಣೆಗೆ ಮೊದಲು ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೇಳಿದೆ.

ಪ್ರೌಢಶಾಲೆ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವರ ಚುನಾವಣಾ ತರಬೇತಿ ಮಾರ್ಚ್‍ನಲ್ಲಿ ನಿಗದಿಪಡಿಸಲಾಗಿದೆ. ಚುನಾವಣಾ ಕರ್ತವ್ಯ ಮತ್ತು ಪರೀಕ್ಷಾ ಕರ್ತವ್ಯಗಳ ಸಂಯೋಜನೆಯಿಂದ ಉಂಟಾಗುವ ಸಮಸ್ಯೆಗಳ ದೃಷ್ಟಿಯಿಂದ, ಪರೀಕ್ಷೆಗಳನ್ನು ಮುಂದೂಡುವ ಬೇಡಿಕೆ ಹೆಚ್ಚಿತ್ತು. ಹಲವಾರು ಶಿಕ್ಷಕರ ಸಂಘಗಳು ಈ ಬಗ್ಗೆ ಸರ್ಕಾರಕ್ಕೆ ಮನವಿ ನೀಡಿತ್ತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries