ತಿರುವನಂತಪುರ: ಕೇರಳದಿಂದ ಖಾಲಿ ಇರುವ ರಾಜ್ಯಸಭಾ ಸ್ಥಾನಗಳಿಗೆ ಸಿಪಿಎಂ ಪ್ರತಿನಿಧಿಗಳಾದ ಜಾನ್ ಬ್ರಿಟಾಸ್ ಮತ್ತು ಡಾ.ವಿ.ಶಿವದಾಸನ್ ಹಾಗೂ ಮುಸ್ಲಿಂ ಲೀಗ್ ಪ್ರತಿನಿಧಿಯಾದ ಅಬ್ದುಲ್ ವಹಾಬ್ ಅವರನ್ನು ಆಯ್ಕೆಮಾಡಲಾಗಿದೆ.ಚುನಾವಣಾ ಅಧಿಕಾರಿ ಮತ್ತು ವಿಧಾನಸಭೆ ಕಾರ್ಯದರ್ಶಿ ಎಸ್. ವಿ. ಉಣ್ಣಿಕೃಷ್ಣನ್ ನಾಯರ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿರುವರು.
ಇತರ ಅಭ್ಯರ್ಥಿಗಳಿಲ್ಲದ ಕಾರಣ ನಾಮಪತ್ರಗಳನ್ನು ಹಿಂಪಡೆಯುವ ಗಡುವು ಮುಗಿದ ಬಳಿಕ ಮೂವರೂ ಆಯ್ಕೆಯಾಗಿದ್ದಾರೆ. ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ಮುನ್ನ ಮೇ 2 ರಂದು ರಾಜ್ಯಸಭಾ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ನಿರ್ದೇಶಿಸಿತ್ತು. ಈ ಕ್ರಮವು ಹೈಕೋರ್ಟ್ ಆದೇಶವನ್ನು ಅನುಸರಿಸಿ ಈ ಆಯ್ಕೆ ನಡೆದಿದೆ.


