ಪಾಲಾ: ಕೋವಿಡ್ ರಕ್ಷಣಾ ಚಟುವಟಿಕೆಗಳಲ್ಲಿ ರಾಜ್ಯದ ಆಶಾ ಕಾರ್ಯಕರ್ತರು ಸಲ್ಲಿಸುತ್ತಿರುವ ಸೇವೆ ಅದ್ಭುತವಾದುದು ಎಂದು ಕೇರಳ ಕಾಂಗ್ರೆಸ್ ಎಂ ಅಧ್ಯಕ್ಷ ಜೋಸ್ ಕೆ ಮಾಣಿ ಹೇಳಿದ್ದಾರೆ.
ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಿಸುವ ಅಗತ್ಯತೆ ಮತ್ತು ಅವರನ್ನು ಆರೋಗ್ಯ ಕಾರ್ಯಕರ್ತರಾಗಿ ಗುರುತಿಸುವ ಮಹತ್ವವನ್ನು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದವರು ನಿನ್ನೆ ಭರವಸೆ ನೀಡಿರುವರು.
ಕಡನಾಡ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿನ್ನೆ ಭೇಟಿ ನೀಡಿದ್ದ ಜೋಸ್ ಕೆ.ಮಾಣಿಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿ ಬೇಗುದಿ ತೊಡಿಕೊಂಡಿದ್ದರು. ಜೋಸ್ ಕೆ.ಮಾಣಿ ಅವರೊಂದಿಗೆ ಪಂಚಾಯತ್ ಅಧ್ಯಕ್ಷೆ ಉಷಾ ರಾಜು ಮತ್ತು ಉಪಾಧ್ಯಕ್ಷ ಸೆನ್ಸೀ ಪುತ್ತುಪರಂಬಿಲ್, ಪಂಚಾಯತಿ ಸದಸ್ಯ ಜೇಸನ್ ಪುತ್ತೆಕಂಡಮ್ ಉಪಸ್ಥಿತರಿದ್ದರು.