HEALTH TIPS

ಗುತ್ತಿಗೆದಾರರು ನಿರ್ಮಾಣ ಚಟುವಟಿಕೆಗಳ ವಿಳಂಬ ಕ್ರಮ ಕೈಬಿಡಬೇಕು

                                                      

               ಕಾಸರಗೋಡು: ಸರ್ಕಾರ ಆಡಳಿತ ಮಂಜೂರಾತಿ ನೀಡಿ, ಟೆಂಡರ್ ಕ್ರಮ ಪೂರ್ತಿಗೊಳಿಸಿದ ಕಾಮಗಾರಿಗಳ ವಿಳಂಬ ಕ್ರಮವನ್ನು ಗುತ್ತಿಗೆದಾರರು ಕೈಬಿಡಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಆಗ್ರಹಿಸಿದರು. ಕೆಲವೆಡೆ ಟೆಂಡರ್ ನಡೆದ ನಂತರವೂ ಗುತ್ತಿಗೆದಾರರ ಉದಾಸೀನತೆಯಿಂದ ನಿರ್ಮಾಣ ಆರಂಭವಾಗದಿರುವ ಉದಾಹರಣೆಗಳಿರುವುದಾಗಿ ಜಿಲ್ಲಾಧಿಕಾರಿ ಕಚೇರಿ ಕಿರು  ಸಭಾಂಗಣದಲ್ಲಿ ನಡೆದ  ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ ಚಟುವಟಿಕೆಗಳ ಅವಲೋಕನ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

               ಡಾಂಬರೀಕರಣ ಪೂರ್ತಿಗೊಳ್ಳದೇ ಇರುವ ರಸ್ತೆಗಳಲ್ಲಿ ಮಳೆ ಕಡಿಮೆಯಾದ ನಂತರ ಕಾಮಗಾರಿ ಮುಂದುವರಿಸಲಾಗುವುದು ಎಂದು ಕೆಲವು ಗುತ್ತಿಗೆದಾರರು ತಿಳಿಸಿದ್ದಾರೆ. ಅವರಿಗೆ ಸಮಯಾವಕಾಶ ನೀಡಿದ ನಂತರವೂ ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್ಚರಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್ ಚಂದ್ ಅವಲೋಕನ ನಡೆಸಿದರು. ಹಣಕಾಸು ಅಧಿಕಾರಿ ಕೆ.ಸತೀಶನ್, ಎ.ಡಿ.ಸಿ.(ಜನರಲ್) ನಿಫಿ.ಎಸ್.ಹಕ್, ಬಿ.ಡಿ.ಒ.ಡಾ.ಅನುಪಂ ಎಸ್., ಸ್ಥಳೀಯಾಡಳಿತ ಸಂಸ್ಥೆ ಇಲಾಖೆ ಇಂಜಿನಿಯರ್ ಗಳು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries