HEALTH TIPS

ಓಣಂಕಿಟ್ ಬೆಲ್ಲ; ಸಿಪಿಎಂ ಸ್ಥಳೀಯ ಸಮಿತಿ ಸದಸ್ಯರ ಅಮಾನತು


         ಕಾಸರಗೋಡು: ಕಾಸರಗೋಡಲ್ಲಿ ಸಿಪಿಎಂ ಓಣಂ ಕಿಟ್ ವಿತರಿಸಿದ ಬೆಲ್ಲದ( ಶರ್ಕರ ಬೆರಟಿ) ವಿವಾದದಲ್ಲಿ ಕ್ರಮ ಕೈಗೊಳ್ಳಲಾಗಿದೆ.  ಸಿಪಿಎಂ ಮಾಣಿಯತ್ ಸ್ಥಳೀಯ ಸಮಿತಿ ಸದಸ್ಯೆ ಪಿಟಿ ಅನಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.  ಮಾಣಿಯತ್ ಶಾಖಾ ಸದಸ್ಯ ಟಿ.ವಿ.ಬಾಲನ್ ರಿಗೆ ಎಚ್ಚರಿಕೆ ನೀಡಲಾಗಿದೆ.  ಕುಟುಂಬಶ್ರೀಗಳ ಹೆಸರಿನಲ್ಲಿ  ಓಣಂ ಕಿಟ್ ನಲ್ಲಿ ಬೆಲ್ಲ ವಿತರಿಸಿದ ಕಾರಣ ಬಳಿಕ ಅದು ವಿವಾದಕ್ಕೆಡೆಯಾಯಿತು.
       ಕಾಸರಗೋಡು ಜಿಲ್ಲೆಯಲ್ಲಿ ವಿತರಿಸಿದ ಓಣಂ ಕ್ಕಿಟ್ ನ್ನು ಭಾಗ್ಯಧರ ಕುಟುಂಬಶ್ರೀ 'ಬೆಲ್ಲ' ಎಂಬ ಹೆಸರಲ್ಲಿ ವಿತರಿಸಿದ್ದರು.  ಕುಟುಂಬಶ್ರೀ ಸದಸ್ಯರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕುಟುಂಬಶ್ರೀ ಕೂಡಾ ಓಣಂ ಕಿಟ್ ಪ್ರತ್ಯೇಕವಾಗಿ ನಡೆಸಿತ್ತು. ಆಡಳಿತದ ಪ್ರಭಾವದಿಂದ ಅವರು ಕುಟುಂಬಶ್ರೀ ಹೆಸರಿನಲ್ಲಿ ಬೆಲ್ಲ ತಯಾರಿಸಿ  ಅದನ್ನು ಓಣಂ ಕಿಟ್ ಮೂಲಕ ಮಾರಾಟ ಮಾಡಿದ್ದರು.
       ಕುಟುಂಬಶ್ರೀ ಹೆಸರಿನ  ನೋಂದಣಿ ಸಂಖ್ಯೆ ಮತ್ತು ಲೇಬಲ್ ಬಳಸಲಾಗಿತ್ತು.  ಆದರೆ ನೀಡಲಾದ ಸಂಪರ್ಕ ಸಂಖ್ಯೆ ಖಾಸಗಿ ವ್ಯಕ್ತಿಯ ಮೊಬೈಲ್ ಸಂಖ್ಯೆಯಾಗಿತ್ತು.  ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸದ ಉತ್ಪನ್ನವನ್ನು ಸರ್ಕಾರವು ಓಣಂ ಕಿಟ್ ಮೂಲಕ ವಿತರಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries