ತಿರುವನಂತಪುರಂ: ರಾಜ್ಯದಲ್ಲಿ ಇಂದು 7722 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತಿರುವನಂತಪುರ 1087, ಎರ್ನಾಕುಳಂ 1047, ತ್ರಿಶೂರ್ 847, ಕೊಲ್ಲಂ 805, ಕೋಝಿಕ್ಕೋಡ್ 646, ಕೊಟ್ಟಾಯಂ 597, ಇಡುಕ್ಕಿ 431, ಪತ್ತನಂತಿಟ್ಟ 421, ಮಲಪ್ಪುರಂ 371, ಆಲಪ್ಪುಳ 364, ಕಣ್ಣೂರು 336, ಪಾಲಕ್ಕಾಡ್ 335, ವಯನಾಡ್ 257, ಕಾಸರಗೋಡು 178 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 71,681 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 77 ಸ್ಥಳೀಯ ಸಂಸ್ಥೆಗಳಲ್ಲಿ 115 ವಾರ್ಡ್ಗಳನ್ನು ಒಳಗೊಂಡಿದೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,69,451 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 2,61,842 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 7609 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 514 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 78,722 ಕೋವಿಡ್ ಪ್ರಕರಣಗಳಲ್ಲಿ, ಕೇವಲ 8.5 ಶೇಕಡ ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 86 ಮಂದಿ ಕೋವಿಡ್ -19 ನಿಂದ ಮೃತರಾಗಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳಂತೆ 109 ಸಾವುಗಳು ಕೋವಿಡ್ ನಿಂದೆಂಬುದು ದೃಢಪಡಿಸಲಾಗಿದೆ. ಮತ್ತು ಕಳೆದ ವರ್ಷ ಜೂನ್ 18 ರವರೆಗೆ 276 ಸಾವುಗಳು ಸಾಕಷ್ಟು ದಾಖಲೆಗಳ ಕೊರತೆಯಿಂದ ದೃಢಪಡಿಸಿರಲಿಲ್ಲ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 31,156ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 43 ಮಂದಿ ಹೊರ ರಾಜ್ಯದವರು. 7348 ಮದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 286 ಮಂದಿಯ ಸಂಪರ್ಕ ಮೂಲವು ಸ್ಪಷ್ಟವಾಗಿಲ್ಲ. ನಲವತ್ತೈದು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6648 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 632, ಕೊಲ್ಲಂ 402, ಪತ್ತನಂತಿಟ್ಟ 272, ಆಲಪ್ಪುಳ 288, ಕೊಟ್ಟಾಯಂ 212, ಇಡುಕ್ಕಿ 362, ಎರ್ನಾಕುಳಂ 1733, ತ್ರಿಶೂರ್ 440, ಪಾಲಕ್ಕಾಡ್ 257, ಮಲಪ್ಪುರಂ 487, ಕೋಝಿಕ್ಕೋಡ್ 744, ವಯನಾಡ್ 195,




