HEALTH TIPS

ಮಳೆ: ಸಂಕಷ್ಟದಲ್ಲಿರುವ ಕೊಟ್ಟಾಯಂಗೆ 8.6 ಕೋಟಿ ರೂ. ತುರ್ತು ಆರ್ಥಿಕ ಸಹಾಯ ಮಂಜೂರು


        ತಿರುವನಂತಪುರಂ: ಭಾರೀ ಮಳೆಯಿಂದ ಸಂಕಷ್ಟದಲ್ಲಿರುವ ಕೊಟ್ಟಾಯಂಗೆ ರಾಜ್ಯ ಸರ್ಕಾರ ತುರ್ತು ಆರ್ಥಿಕ ಸಹಾಯವನ್ನು ಮಂಜೂರು ಮಾಡಿದೆ.  ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ `8 ಕೋಟಿ 60 ಲಕ್ಷ ಮೊತ್ತವನ್ನು ಜಿಲ್ಲಾಧಿಕಾರಿಗೆ ಮಂಜೂರು ಮಾಡಲಾಗಿದೆ.  ಈ ಮೊತ್ತವನ್ನು ತುರ್ತು ಪರಿಹಾರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.
         ಕೊಟ್ಟಾಯಂ, ಮೀನಾಚಲ್ ಮತ್ತು ಕಾಂಜಿರಪಳ್ಳಿ ತಾಲ್ಲೂಕುಗಳಲ್ಲಿ ಭಾರೀ ಮಳೆ ಮತ್ತು ಭೂಕುಸಿತವು ತೀವ್ರ ಹಾನಿಯನ್ನುಂಟು ಮಾಡಿದೆ.  ಅನೇಕರು ಮೃತಪಟ್ಟಿರುವರು.  1706 ಜನರನ್ನು ವಿವಿಧ ತಾಲೂಕುಗಳಿಂದ ವಿವಿಧ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.  ನಿನ್ನೆ ಕೂಟಿಕಲ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.  ಕೊಕ್ಕಾಯಾರ್‌ನಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.
         ಕಳೆದ ಮಂಗಳವಾರದಿಂದ ರಾಜ್ಯದಲ್ಲಿ 35 ಜನರು ಮುಂಗಾರು ಹಾನಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿದೆ.  ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ಘೋಷಿಸಿದೆ.  ಮೊತ್ತವನ್ನು ಶೀಘ್ರವೇ ಪಾವತಿಸಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.  ಪ್ರವಾಹ ಪೀಡಿತ ಕೇರಳಕ್ಕೆ ಎಲ್ಲಾ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ತಿಳಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries