4,444 ಕಿ.ಮೀ ದೂರವನ್ನು 76 ದಿನಗಳಲ್ಲಿ ಓಡುವ ಮೂಲಕ ಈ ವಯಸ್ಸಿನಲ್ಲಿ ಯಾವುದೇ ಭಾರತೀಯರು ಓಟದ ಮೂಲಕ ಕ್ರಮಿಸದ ದೂರವನ್ನು ಕ್ರಮಿಸಿ ದಾಖಲೆ ನಿರ್ಮಾಣ ಮಾಡುವ ಉದ್ದೇಶವನ್ನು ಕುಮಾರ್ ಅಜ್ವಾನಿ ಹೊಂದಿದ್ದಾರೆ.
ಜಾಗೃತಿ ಮೂಡಿಸುವುದು ಹಾಗೂ ವಿಶೇಷಚೇತನ ಯೋಧರಿಗೆ ನೆರವಾಗುವ ನಿಟ್ಟಿನಲ್ಲಿ ನಿಧಿ ಸಂಗ್ರಹ ಮಾಡುವುದು ಕುಮಾರ್ ಅಜ್ವಾನಿ ಅವರ ಪ್ರಮುಖ ಉದ್ದೇಶವಾಗಿದೆ ಎಂದು ಜಮ್ಮು-ಕಾಶ್ಮೀರ ಮೂಲದ ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.
ನ.19 ರಂದು ಉಧಮ್ ಪುರದ ಜಿಲ್ಲೆಯ ಪಟ್ನಿಟಾಪ್ ಹಿಲ್ ರೆಸಾರ್ಟ್ ನಿಂದ ಓಟ ಪ್ರಾರಂಭಿಸಿ ಮೂರನೇ ದಿನಕ್ಕೆ ತಮ್ಮ ಓಟವನ್ನು ಮುಂದುವರೆಸಿರುವ ಕುಮಾರ್ ಅಜ್ವಾನಿ ಅವರಿಗೆ ಜಮ್ಮು-ಕಾಶ್ಮೀರದ ಸೈನಿಕ ಕಲ್ಯಾಣ ಇಲಾಖೆಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.
ಫಿಟ್ನೆಸ್ ಹಾಗೂ ಜಾಗೃತಿ ಮೂಡಿಸುವ, ದಾನದ ಮೂಲಕ ಆನಂದವನ್ನು ಸಾಧಿಸುವ ವಿಷಯವಾಗಿ ಜಾಗೃತಿ ಮೂಡಿಸುತ್ತಿರುವ ಟೀಮ್ ಎಫ್ಎಬಿ ಎಂಬ ಎನ್ ಜಿಒದ ಸ್ಥಾಪಕ-ನಿರ್ದೇಶಕರಾಗಿರುವ ಅಜ್ವಾನಿ ತಮ್ಮ ಈ ಓಟಕ್ಕೆ ಆತ್ಮನಿರ್ಭರ್ ಭಾರತ್ ರನ್ ಎಂಬ ಹೆಸರನ್ನು ನೀಡಿದ್ದಾರೆ. ಕೇವಲ ಯೋಧರಿಗಾಗಿ ನಿಧಿ ಸಂಗ್ರಹವಷ್ಟೇ ಅಲ್ಲದೇ, ಗುಣಮಟ್ಟದ ಶಿಕ್ಷಣ, ಬುಡಕಟ್ಟು ಶಾಲೆಗಳ ಉನ್ನತೀಕರಣ, ಒಂದೇ ಭಾರತ, ಒಗ್ಗಟ್ಟಿನ ಭಾರತ ಎಂಬ ಸಂದೇಶ ಸಾರುವುದೂ ಸಹ ಈ ಓಟದ ಪ್ರಮುಖ ಉದ್ದೇಶವಾಗಿದೆ.
ಅಜ್ವಾನಿ ಅಲ್ಟ್ರಾ ಮ್ಯಾರಥಾನ್ ರನ್ನರ್ ಆಗಿದ್ದು, ಸಾಮಾಜಿಕ ಉದ್ದೇಶಗಳಿಗಾಗಿ ಅಂತಾರಾಜ್ಯ, ಅಂತರ ನಗರಗಳನ್ನು ಮ್ಯಾರಥಾನ್ ಓಟದ ಮೂಲಕ ತಲುಪಿದ್ದಾರೆ.
ಶಿವಮೊಗ್ಗ: ಮತ್ತೋರ್ವ ಬಿಜೆಪಿ ನಾಯಕನ ಪುತ್ರ ರಾಜಕೀಯಕ್ಕೆ ಎಂಟ್ರಿ, ರಾರಾಜಿಸಿದ ಕುಟುಂಬ ರಾಜಕಾರಣ!
ಮೋದಿಯ ಉತ್ತರಾಧಿಕಾರಿ?!: ಪ್ರಧಾನಿ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಆತ್ಮೀಯ ಭಾವದ ಫೋಟೋ ಭರ್ಜರಿ ವೈರಲ್!
ಒಂದೇ ಇನ್ನಿಂಗ್ಸ್ನಲ್ಲಿ 10 ವಿಕೆಟ್.. ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾದ ಬೌಲರ್
ಪಶ್ಚಿಮ ಬಂಗಾಳ: ಕಾಳಿ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಡ ಮುಸ್ಲಿಂ ರೈತ
ನೇಪಾಳದಲ್ಲಿ ಯೋಗ ಗುರು ರಾಮ್ ದೇವ್ ಟಿವಿ ಚಾನಲ್; ಎದುರಾಯ್ತು ಆರೋಪ, ವಿರೋಧ!
















