HEALTH TIPS

ಧೂಮಪಾನ ಮಾಡಿದ ಪ್ರಯಾಣಿಕ: ಮಧ್ಯದಲ್ಲೇ ನಿಂತ ನೇತ್ರಾವತಿ ಎಕ್ಸ್ ಪ್ರೆಸ್

                                                

                         ಮಲಪ್ಪುರಂ: ಪ್ರಯಾಣಿಕನೊಬ್ಬ ಧೂಮಪಾನ ಮಾಡಿದ ಹಿನ್ನೆಲೆಯಲ್ಲಿ ನೇತ್ರಾವತಿ ಎಕ್ಸ್‍ಪ್ರೆಸ್ ತಿರೂರ್ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಎಚ್.ಎಲ್.ಬಿ  ಎಸಿ ಕೋಚ್‍ನಲ್ಲಿದ್ದ ಪ್ರಯಾಣಿಕರು ರೈಲಿನೊಳಗೆ ಧೂಮಪಾನ ಮಾಡುತ್ತಿದ್ದರು. ಭಾರತೀಯ ರೈಲ್ವೇಯಿಂದ ಎಲ್.ಎಚ್.ಬಿ. ರೇಕ್‍ಗಳಿರುವ ಎಲ್ಲಾ ಎ.ಸಿ. ಕೋಚ್‍ಗಳಲ್ಲಿ ಹೊಗೆಬತ್ತಿ ಪತ್ತೆ ವ್ಯವಸ್ಥೆಯನ್ನು ಪ್ರಸ್ತುತ ಸ್ಥಾಪಿಸಲಾಗಿದೆ.

            ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದರೂ ಎಲ್ಲೂ ಹೊಗೆ ಪತ್ತೆಯಾಗಿಲ್ಲ. ಆದರೆ, ಪ್ರಯಾಣಿಕರೊಬ್ಬರು ಪತ್ತೆ ಯಂತ್ರದ ಬಳಿಯೇ ಹೊಗೆಬತ್ತಿ ಸೇದುತ್ತಿರುವುದರಿಂದ ರೈಲು ನಿಂತಿತು. ರೈಲಿನೊಳಗೆ ಧೂಮಪಾನ ಮಾಡದಂತೆ ಸ್ಪಷ್ಟ ಸೂಚನೆ ಇದ್ದರೂ ಕೆಲವರು ಅದನ್ನು ಪಾಲಿಸಲು ಮುಂದಾಗುತ್ತಿಲ್ಲ.

                 ಭಾರತದ ಬಹುತೇಕ ಎಲ್ಲಾ ರೈಲು ನಿಲ್ದಾಣಗಳಲ್ಲಿ ಬೆಂಕಿ ಮತ್ತು ಹೊಗೆ ಪತ್ತೆ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಈಗಾಗಲೇ ಡಿಟೆಕ್ಟರ್‍ಗಳು ಕಾರ್ಯನಿರ್ವಹಿಸುತ್ತಿವೆ.

                 ಜರ್ಮನ್ ತಂತ್ರಜ್ಞಾನವನ್ನು ಆಧರಿಸಿದ ಎ.ಸಿ.ಕೋಚ್‍ಗಳಿಗೆ ಈ ಯಂತ್ರ ಅಳವಡಿಸಲಾಗಿದೆ. ಇವು ವೇಗವಾಗಿ ಮತ್ತು ಸುರಕ್ಷಿತವಾಗಿವೆ. ಅಪಘಾತದ ಸಂದರ್ಭದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆಯದಿರುವ ವೈಶಿಷ್ಟ್ಯವೂ ಇದರಲ್ಲಿದೆ. ಈ ಹಿಂದೆ ದೆಹಲಿಗೆ ಕೇರಳದಿಂದ ತೆರಳುವ  ಎಕ್ಸ್‍ಪ್ರೆಸ್ ರೈಲುಗಳ ಕೋಚ್ ಗಳಿಗೆ ಎಲ್‍ಎಚ್ ಬಿ ಎಸಿ ಗೆ ಈ ಯಂತ್ರ ಅಳವಡಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries