HEALTH TIPS

ಮಾರಾಡ್ ಹತ್ಯಾಕಾಂಡ: ನ್ಯಾಯಾಲಯ ವಿಧಿಸಿರುವ ಶಿಕ್ಷೆಯಿಂದ ಧಾರ್ಮಿಕ ಭಯೋತ್ಪಾದಕರಿಗೆ ಭಾರಿ ಹಿನ್ನಡೆ: ಎನ್‍ಡಿಎಫ್‍ನ ಪಾತ್ರವನ್ನು ಸ್ಪಷ್ಟಪಡಿಸುತ್ತದೆ: ವಲ್ಸನ್ ತಿಲಂಗೇರಿ

               

                   ತಿರುವನಂತಪುರ: ಮಾರಾಡ್ ಹತ್ಯಾಕಾಂಡದ ಆರೋಪಿಗಳಿಗೆ ನೀಡಿರುವ ತೀರ್ಪು ಧಾರ್ಮಿಕ ಭಯೋತ್ಪಾದಕರಿಗೆ ಮುನ್ನೆಚ್ಚರಿಕೆ ಎಂದು ಹಿಂದೂ ಐಕ್ಯವೇದಿ ರಾಜ್ಯ ಕಾರ್ಯಾಧ್ಯಕ್ಷ ವತ್ಸನ್ ತಿಲ್ಲಂಗೇರಿ ಹೇಳಿರುವರು. ಎಂಟು ಮಂದಿ ಹಿಂದೂಗಳ ಹತೈಗೈದು ತಲೆಮರೆಸಿಕೊಂಡಿದ್ದ ಇಬ್ಬರು ಅಪರಾಧಿಗಳು ಕೊನೆಗೂ ಸಿಕ್ಕಿಬಿದ್ದು ಶಿಕ್ಷೆಗೊಳಗಾಗಿರುವರು. ನ್ಯಾಯಾಲಯದ ತೀರ್ಪು ಮತ್ತೊಮ್ಮೆ ಹತ್ಯಾಕಾಂಡದಲ್ಲಿ ಎನ್‍ಡಿಎಫ್ ಪಾತ್ರವನ್ನು ತೋರಿಸುತ್ತದೆ ಎಂದು ವತ್ಸನ್ ತಿಲ್ಲಂಗೇರಿ ಹೇಳಿದರು.

                 ಕೊಲೆ, ಹಿಂಸಾಚಾರವು ಪಿತೂರಿಯ ಪರಿಣಾಮವಾಗಿದೆ ಎಂದು ನ್ಯಾಯಾಲಯದ ತೀರ್ಪಿನ ಉಲ್ಲೇಖವು ತುಂಬಾ ಗಂಭೀರವಾಗಿದೆ. ಸ್ಫೋಟಕ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು ಮಾರಾಡ್ ನ ಹೊರಗಿರುವುದು ಹತ್ಯಾಕಾಂಡದ ಹಿಂದೆ ಬಾಹ್ಯ ಸಂಪರ್ಕವಿದೆ ಎಂಬುದಕ್ಕೆ ಬಲವಾದ ಸಾಕ್ಷಿಯಾಗಿದೆ. ಪರಾರಿಯಾದವರಿಗೆ ಧಾರ್ಮಿಕ ಭಯೋತ್ಪಾದಕ ಗುಂಪುಗಳು ಕಾನೂನು ನೆರವು ನೀಡಿವೆ. ಮಾರಾಡ್ ಹತ್ಯಾಕಾಂಡದ ನಂತರ ತಲೆಮರೆಸಿಕೊಂಡಿರುವ ಆರೋಪಿಗಳನ್ನು ರಕ್ಷಿಸಿದವರು ಯಾರು ಎಂಬುದು ಸಾರ್ವಜನಿಕರಿಗೆ ಗೊತ್ತಾಗಬೇಕು ಎಂದು ತಿಲ್ಲಂಗೇೀರಿ ಹೇಳಿದರು.

                   ಹತ್ಯಾಕಾಂಡದ ನಂತರ ಸಂತ್ರಸ್ತರನ್ನು ನಿರ್ಲಕ್ಷಿಸಿ ಕೊಲೆಗೆಡುಕರನ್ನು  ರಕ್ಷಿಸಿದ ರಾಜ್ಯದ ಎಡ-ಬಲ ಎರಡೂ ರಂಗಗಳಿಗೆ ನ್ಯಾಯಾಲಯದ ತೀರ್ಪು ತೀವ್ರ ಹೊಡೆತವಾಗಿದೆ. ಬಂಧುಗಳ ಕಗ್ಗೊಲೆ ಮಾಡಿದರೂ ಕಾನೂನು ಸುವ್ಯವಸ್ಥೆಯಲ್ಲಿ ನಂಬಿಕೆ ಇಟ್ಟ ಆರ್ಯಸಮಾಜ ಹಾಗೂ ಹಿಂದೂ ಸಂಘಟನೆಗಳ ಗೆಲುವಿದು. ಭಯೋತ್ಪಾದಕರು ಎಲ್ಲಿ ಅಡಗಿಕೊಂಡರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ಎನ್‍ಡಿಎಫ್ ನ್ನು ರಕ್ಷಿಸುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಇದನ್ನು ಗುರುತಿಸಬೇಕು ಎಂದು ಅವರು ಒತ್ತಾಯಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries