HEALTH TIPS

ತೆರಿಗೆ ಕಡಿತಗೊಳಿಸಲಾಗದು, ಮುಷ್ಕರ ನಡೆಸಬಹುದು: ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸುವುದಾಗಿ ಸಿಪಿಎಂ

                                                              

                 ತಿರುವನಂತಪುರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸುವುದಾಗಿ ಸಿಪಿಎಂ ರಾಜ್ಯ ಸಮಿತಿ ಹೇಳಿದೆ. ಕೇಂದ್ರವು ತೆರಿಗೆಯನ್ನು ಕಡಿಮೆ ಮಾಡಿದರೂ ರಾಜ್ಯ ಸರ್ಕಾರ ತೆರಿಗೆಯನ್ನು ಕಡಿಮೆ ಮಾಡದಿರಲು ನಿರ್ಧರಿಸಿದ ನಂತರ ಹೊಸ ಮುಷ್ಕರ 'ಘೋಷಣೆ' ಮಾಡಲಾಗಿದೆÉ.

                   ಪಕ್ಷದ ಕೇಂದ್ರ ಸಮಿತಿಯ ಕರೆಯ ಮೇರೆಗೆ ನ.16ರಂದು ಪ್ರತಿಭಟನಾ ಧರಣಿ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಆಯಾ ಜಿಲ್ಲಾ ಹಾಗೂ ಸ್ಥಳೀಯ ಕೇಂದ್ರಗಳಲ್ಲಿರುವ ಕೇಂದ್ರ ಸರಕಾರಿ ಸಂಸ್ಥೆಗಳ ಎದುರು ಧರಣಿ ನಡೆಯಲಿದೆ. ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ತಡೆಯಲು ರಾಜ್ಯ ಸಮಿತಿಯು ಅಭಿಯಾನವನ್ನು ಸಹ ರೂಪಿಸಲಿದೆ. ಪ್ರತಿಭಟನೆಯಲ್ಲಿ ಸಾಧ್ಯವಾದಷ್ಟು ಜನರನ್ನು ಸೇರಿಸಿಕೊಳ್ಳುವಂತೆ ಅಧೀನ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ.

                        ಕೇಂದ್ರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂ ಮತ್ತು ಡೀಸೆಲ್ ಮೇಲೆ 10 ರೂ ಕಡಿತಗೊಳಿಸಿದೆ. ಉತ್ತರಪ್ರದೇಶ, ಕರ್ನಾಟಕ, ಬಿಹಾರ, ಒಡಿಶಾ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ರಾಜ್ಯಗಳು ತಮ್ಮ ರಾಜ್ಯ ತೆರಿಗೆಯನ್ನು ಅದಕ್ಕೆ ತಕ್ಕಂತೆ ಕಡಿತಗೊಳಿಸಿದ್ದವು. ಆದರೆ ಕೇರಳದಲ್ಲಿ ತೆರಿಗೆ ಕಡಿತ ಮಾಡದಿರಲು ಪಕ್ಷ ನಿರ್ಧರಿಸಿದೆ. ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಮಾತನಾಡಿ, ತೆರಿಗೆ ಇಳಿಸಲು ಸಾಧ್ಯವಾಗದಿರಲು ರಾಜ್ಯದಲ್ಲಿನ ಆರ್ಥಿಕ ಬಿಕ್ಕಟ್ಟು ಕಾರಣ ಎಂದಿರುವರು.

              ಪೆಟ್ರೋಲ್ ಬೆಲೆ ಇಳಿಕೆ ಮಾಡಿಲ್ಲ ಎಂದು ಕೇಂದ್ರದ ಮೇಲೆ ಆರೋಪ ಮಾಡಿದ್ದ ರಾಜ್ಯ ಸರ್ಕಾರ ಇದೀಗ ತೆರಿಗೆ ಇಳಿಕೆ ಮಾಡದೇ ಇಂಧನ ಬೆಲೆ ಇಳಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries